ಮಳೆಗಾಗಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ ಶಾಸಕ ಎನ್‌.ಹೆಚ್‌. ಕೋನರಡ್ಡಿ

ನವಲಗುಂದ 31 :ಮಳೆ ಇಲ್ಲದೇ ರೈತರು ಜಮೀನಿನಲ್ಲಿರುವ ಬೆಳೆಗಳು ಬಾಡುತ್ತಿರುವುದನ್ನು ಕಂಡು ನವಲಗುಂದ ನಗರದ ಗ್ರಾಮ ದೇವತೆಗೆ ಮಹಿಳೆಯರಿಂದ ಉಡಿ ತುಂಬಿ ಬೇಗನೆ ಮಳೆಯಾಗಲೆಂದು ತಾಯಿಗೆ ನವಲಗುಂದ ವಿದಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಪ್ರಾರ್ಥಿಸಿದರು.  

ಅವರು ಇಂದು ಮಂಗಳವಾರ ನವಲಗುಂದದ ಗ್ರಾಮ ದೇವತೆ, ದುರ್ಗಮ್ಮನ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಹನುಮಂತ ದೇವರ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ನವಲಗುಂದ ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿಗೆ ಬೇಗ ಮಳೆಯಾಗಿ ಬೆಳೆಗಳನ್ನು ಉಳಿಸು ತಾಯಿ ಎಂದು ಮಹಿಳೆಯರು ಹಾಗೂ ಹೀರೀಯರೊಂದಿಗೆ ಪೂಜೆ ಸಲ್ಲಿಸಿ ರೈತರು ಬೆಳೆದ ಅಲ್ಪ ಸ್ವಲ್ಪ ಬೆಳೆಗಳನ್ನು ಕಾಪಾಡಿ ಕೈಗೆ ಬಂದ ತುತ್ತು ಬಾಯಿಗೆ ಬರುವಂತಾಗಲಿ ಎಂದು ಅಲ್ಲಲ್ಲಿ ಮಳೆ ಪ್ರಾರಂಭವಾಗುವ ಲಕ್ಷಣಗಳಿದ್ದು ನಮ್ಮ ಪ್ರದೇಶಕ್ಕೂ ಮಳೆ ತಾಯಿ ರೈತರಿಗೆ ಆಶೀರ್ವದಿಸಲೆಂದು ಕೋನರಡ್ಡಿ ಪ್ರಾರ್ಥಿಸಿದರು.  

ಈ ಸಂದರ್ಭದಲ್ಲಿ ನಗರದ ಹೀರೀಯರಾದ ಬಸವರಾಜ ಹರಿವಾಳದ, ಆನಂದ ಹವಳಕೋಡ,ಪ್ರಕಾಶ ಶಿಗ್ಲಿ, ಡಿ.ಕೆ. ಹಳ್ಳದ, ಕೊಟ್ರೇಶ ಹಿರೇಮಠ,ಸುರೇಶ ಮೇಟಿ, ಯಲ್ಲಪ್ಪ ಉಕ್ಕಲಿ, ವೀರಣ್ಣ ಪೂಜಾರ, ಶರ್ಮಾಜಿ ಹಿರೇಮಠ, ಶಂಕರಗೌಡ ತಿಪ್ಪಿಮನಿ, ಮಲ್ಲಪ್ಪ ಹಂಡಿ, ಶೇಖಪ್ಪ ಕರಲಿಂಗಣ್ಣವರ ಹಾಗೂ ತಾಯಂದಿರರು ಇತರರು ಉಪಸ್ಥಿತರಿದ್ದರು.