ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ
MLA DM Aihole launches road improvement work
ರಾಯಬಾಗ 14 : ಮತಕ್ಷೇತ್ರದಲ್ಲಿರುವ ತೋಟದ ರಸ್ತೆ ಸುಧಾರಣೆ ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದರ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಪಂಚಾಯತ ರಾಜ್ ಇಲಾಖೆಯಿಂದ ವಿವಿಧ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಚಿಂಚಲಿ ಮುಖ್ಯ ರಸ್ತೆಯಿಂದ ಮಾಂಗ ಮನೆಯ ವರೆಗೆ ಹಾಗೂ ಡೋರ ಜನಾಂಗದ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ, 30 ಲಕ್ಷ ರೂ.ವೆಚ್ಚದಲ್ಲಿ ಉಪ್ಪಾರ ಕೋಡಿ ರಸ್ತೆಯಿಂದ ಚಿಂಚಲಿ-ಬೆಕ್ಕೇರಿ ಕೂಡು ರಸ್ತೆ ಸುಧಾರಣೆ, 5 ಲಕ್ಷ ರೂ.ವೆಚ್ಚದಲ್ಲಿ ಧರಣ ರಸ್ತೆಯಿಂದ ಹಳಚಪಟ್ಟಿ ರಸ್ತೆ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ರಸ್ತೆ ಸುಧಾರಣೆಯಿಂದ ಸಾರಿಗೆ ಸಂಚಾರ ಸುಗಮವಾಗುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವುದು ಎಂದರು.
ಸದಾಶಿವ ಘೋರೆ್ಡ, ಅಂಕುಶ ಜಾಧವ, ಅನೀಲ ಮೈಶಾಳೆ, ಕಲ್ಲಪ್ಪ ಮೈಶಾಳೆ, ಪ್ರಭು ಮೈಶಾಳೆ, ಸಂಜು ಮೈಶಾಳೆ, ಕದ್ದು ಜಾಧವ, ಪೊಪಟ ಜಾಧವ, ಗಂಗಪ್ಪ ಪುಜೇರಿ, ರಾಮು ಪುಜೇರಿ, ಲಕ್ಷ್ಮಣ ಕೋಳಿ, ರಾಮಾ ಕೋಳಿ, ಗಣಪತಿ ಕೋಳಿ, ಪ್ರಕಾಶ ಜಾಧವ, ದೀಪಕ ಜಾಧವ, ಅಜಿತ ಜಾಧವ, ಲಕ್ಷ್ಮಣ ತುಳಸಗೇರಿ, ರಾವಸಾಬ ಜಾಧವ, ಮಲ್ಲು ಪಾಟೀಲ, ಮಹಾವೀರ ಮಾಂಜರೆ, ರಾಜು ಪೋಳ ಸೇರಿ ಅನೇಕರು ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 