ಸಾಹಿತ್ಯ- ಸಂಸ್ಕೃತಿ ಸೃಜನಶೀಲತೆಯ ಸವಾಲುಗಳು

ಧಾರವಾಡ 25: ಈ ಹಿಂದೆ ಕರ್ನಾಟಕ ಕೇವಲ ಗಡಿಭಾಗದ ನಾಡುಗಳನಷ್ಟೆ ಕಳೆದುಕೊಂಡಿಲ್ಲ ಬದಲಾಗಿ ಅಲ್ಲಿನ ಪ್ರಾದೇಶಿಕ ಸಾಹಿತ್ಯವನ್ನು ಕಳೆದುಕೊಂಡಿದೆ ಎಂದು ಡಾ. ಗುರುಪಾದ ಮರೆಗುದ್ದಿ ಹೇಳಿದರು. 

ಕವಿವಿ ಸಂಘ ಅಥಣಿಯಲ್ಲಿ ಆಯೋಜಿಸಿದ್ದ  ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ  ‘ಸಾಹಿತ್ಯ ಮತ್ತು ಸಂಸ್ಕೃತಿ ಮೊದಲ ಗೋಷ್ಠಿ’ ಯಲ್ಲಿ ಮಾತನಾಡಿದ ಅವರು ಕನ್ನಡದ ಉಪಭಾಷೆಯ ಸಮುದಾಯಗಳ ಜನರ ಭಾಷಾ ಪ್ರಯೋಗವನ್ನು ಬಳಸಿಕೊಂಡ ಸಾಹಿತ್ಯಗಳು ರಚನೆಯಾಗಬೇಕು  ಅದರಲ್ಲಿ ಸೃಜನಶೀಲತೆಯ ಕಾವ್ಯಗಳು ಅಡಗಿವೆ, ಆಧುನಿಕತೆಯಲ್ಲಿ ಮಾದ್ಯಮಗಳ ಶಿಷ್ಟಭಾಷ ಪ್ರಯೋಗದಿಂದ ಪ್ರಭಾವಿತರಾಗುತ್ತಿದ್ದೇವೆ ಆದರೆ ನಮ್ಮ ಮೂಲ ಸಂಸ್ಕೃತಿಯ ಮರೆಯುತ್ತಿದ್ದೇವೆ, ಸೃಜನಶೀಲ ಸಾಹಿತಿ, ಕಲಾವಿದ ಮತ್ತು ಈ ನೆಲವನ್ನ ಅರ್ಥಮಾಡಿಕೊಳ್ಳದಿದ್ದರೆ ಇಲ್ಲಿಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಶ್ರೀಶೈಲ ಹೊರ್ತಿಕರ ಕನ್ನಡ ಕಲಿಸಿದರೆ ಕನಿಷ್ಠರು ಎನ್ನುವ ಪ್ರಜ್ಞೆಯನ್ನು ಇಂದಿನ ಜನರು ಬೆಳಸಿಕೊಂಡು ಪಾಶ್ಚಿಮಾತ್ಯರ ಅಂದಾನುಕರಣೆಯಲ್ಲಿ ತೊಡಗುತ್ತಿದ್ದಾರೆ ಈ ವ್ಯವಸ್ಥೆ ಬದಲಾಗಬೇಕಿದೆ, ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ನಮ್ಮ ಸಂಸ್ಕೃತಿಯು ನಾಶವಾಗುತ್ತಿದೆ, ಮೊಬೈಲ ಬಳಕೆಯಿಂದಾಗಿ  ನಮ್ಮತನವನ್ನು ಕಳೆದುಕೊಂಡು ನಮ್ಮ ಭಾಷೆಯನ್ನು ದೂರ ಮಾಡಿಕೊಳ್ಳುತ್ತಿದ್ದು ಜನರು ಆಂಗ್ಲಭಾಷಾ ವ್ಯಾಮೋಹಕ್ಕೆ ಒಳಗಾಗುತ್ತಿರುವದು ವಿಷಾದನೀಯ ಎಂದರು. ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮತ್ತು ಕಾರ‌್ಯಕಾರಿ ಸಮಿತಿ ಸದಸ್ಯ ಡಾ. ಧನವಂತ ಹಾಜವಗೋಳ ವೇದಿಕೆಯಲ್ಲಿದ್ದರು. ಚಿದಾನಂದ ಮಾಸನಕಟ್ಟಿ ಸ್ವಾಗತಿಸಿದರು ಗುರುರಾಜ ಸಬನೀಸ ನಿರೂಪಿಸಿ ವಂದಿಸಿದರು.