ಬೆಳಗಾವಿ 22 : ನಗರದ ಶ್ರೀ ವೆಂಕಟೇಶ್ವರ ಸೇವಾ ಸಂಘದವರು ವಡಗಾವಿ ವೆಂಕಟೇಶ್ವರ ದೇವಸ್ಥಾನದಲ್ಲಿ ಇದೇ ದಿ. 23 ಬುಧವಾರದಿಂದ ದಿ. 27 ರವಿವಾರದ ವರೆಗೆ ಪ್ರತಿದಿನ ಸಾ. 6 ಗಂಟೆಗೆ ಐದು ದಿನಗಳ ಕಾಲ ಭಾಗವತ ಉಪನ್ಯಾಸವನ್ನು ಹಮ್ಮಿಕೊಂಡಿದ್ದಾರೆ.
ಉಪನ್ಯಾಸಕರಾಗಿ ಸೋಸಲೆ ವ್ಯಾಸರಾಜ ಮಠದ ಪಂ. ಬ್ರಹ್ಮಣ್ಯಾಚಾರ್ಯರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬಳವಂತ ಬಿ. ದೇಶಪಾಂಡೆ ವಹಿಸಿಕೊಂಡಿದ್ದಾರೆ. ಈ ಉಪನ್ಯಾಸದ ಸದುಪಯೋಗ ಪಡೆದುಕೊಂಡು ಹರಿವಾಯು ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾಗುವಂತೆ ಕೇಶವ ಮಹುಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.