ಹುಣಶ್ಯಾಳ ಪಿ.ಜಿ: ಸ್ಮಾಟರ್್ ಕ್ಲಾಸ್ ಉದ್ಘಾಟನೆ
ಲೋಕದರ್ಶನ ವರದಿ
ಘಟಪ್ರಭಾ 29: ಸಕರ್ಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಾರ್ವಜನಿಕರು ಕೈಜೋಡಿಸಿದರೆ ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳಾಗಿ ಮಾಡಲು ಸಹಕಾರಿಯಾಗುತ್ತದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ಹೇಳಿದರು.
ಅವರು ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಸಾರ್ವಜನಿಕರ ದೇಣಿಗೆಯಿಂದ ನಿಮರ್ಿಸಲಾದ ಮೂರು ಸ್ಮಾಟರ್್ ಕ್ಲಾಸ್ಗಳನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯೊಂದು ದೇಗುಲವಿದ್ದಂತೆ ಇಂತಹ ದೇಗುಲದಲ್ಲಿ ಸಾವಿರಾರು ವಿದ್ಯಾಥರ್ಿಗಳು ವಿದ್ಯಾರ್ಜನೆ ಮಾಡುತ್ತಾರೆ.
ಸಾರ್ವಜನಿಕರು ದೇವಸ್ಥಾನಗಳಿಗೆ ನೀಡುವ ದಾನಗಳಲ್ಲಿ ಒಂದಿಷ್ಟು ಸಕರ್ಾರಿ ಶಾಲೆಗಳಿಗೆ ನೀಡಿದರೆ ಶಾಲೆಗಳ ಅಭಿವೃದ್ಧಿ ಹೊಂದುತ್ತವೆ. ಈ ನಿಟ್ಟಿನಲ್ಲಿ ಮುಂದಾಗಿರುವ ಹುಣಶ್ಯಾಳ ಪಿ.ಜಿ ಗ್ರಾಮಸ್ಥರು ಸುಮಾರು ಶಾಲೆಗೆ 2,13,000 ರೂಪಾಯಿ ದೇಣಿಗೆ ನೀಡಿ ತಮ್ಮ ಊರಿನ ಶಾಲೆಗೆ ತಾವೇ ಸ್ಮಾಟರ್್ ಕ್ಲಾಸ್ಗಳನ್ನು ನಿಮರ್ಿಸಿಕೊಂಡು ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯ ಜಿ.ಎಲ್.ಕೋಳಿ ಮಾತನಾಡಿ, ಇಂದಿನ ತಾಂತ್ರಿಕ ಯುಗದಲ್ಲಿ ಸ್ಮಾಟರ್್ ಕ್ಲಾಸ್ಗಳು ಅತಿ ಅವಶ್ಯಕವಾಗಿದ್ದು ಊರಿನ ಮಹನೀಯರು ದೇಣಿಗೆ ನೀಡಿದ್ದು ಶ್ಲಾಘನಿಯ ಎಂದರು. ಗೋಕಾಕ ವಿವೇಕ ಕೋಚಿಂಗ್ ಕೇಂದ್ರದ ಸಂಸ್ಥಾಪಕ ಎಸ್.ಕೆ.ಕಬಾಡಗಿ ಮಕ್ಕಳ ಮನಮುಟ್ಟುವಂತೆ ವಿವೇಕಾನಂದರ ವಿವೇಕವಾಣಿಗಳನ್ನು ಹೇಳುವ ಮೂಲಕ ದೇಶಭಕ್ತಿ ಹಾಗೂ ಗುರಿ ಮುಟ್ಟುವ ಸಂದೇಶವನ್ನು ನೀಡಿದರು.
ಇದೇ ಸಂದರ್ಭದಲ್ಲಿ ದೇಣಿಗೆ ನೀಡಿದ ಮಹನೀಯರನ್ನು ಕೃತಜ್ಞತೆ ಸಲ್ಲಿಸಿ ಸತ್ಕರಿಸಲಾಯಿತು. ಶಾಲೆಯ ಮುಖೋಪಾಧ್ಯಾಯ ಜಿ.ಎಲ್.ಕೋಳಿ ಅವರಿಗೆ ಕನರ್ಾಟಕ ಭೂಷಣ ಪ್ರಶಸ್ತಿ ಲಭಿಸಿದ ಪ್ರಯುಕ್ತ ಸತ್ಕರಿಸಲಾಯಿತು.
ಶಿಕ್ಷಕರಾದ ಬಿ.ಬಿ.ದಗಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎ.ಗೌಡರ ಸ್ವಾಗತಿಸಿದರು. ಕೆ.ಎಂ.ಅರಭಾವಿ ನಿರೂಪಿಸಿದರು. ಎಸ್.ಎಸ್.ಹೂಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಆರ್.ಬಿ.ನಾಯ್ಕ್, ಎಸ್.ಡಿ.ಎಮ್.ಸಿ ಅಧ್ಯಕ್ಷ ತಮ್ಮಣ್ಣ ನಾಯ್ಕ್, ಮಹದೇವ ಕಡಿ, ತುಕಾರಾಮ ಬಂಗೇರ, ಗಂಗಪ್ಪ ಡಬ್ಬಣ್ಣವರ್, ಪ್ರಕಾಶ ನೇಸರಗಿ, ಮಹಾಂತೇಶ ರೊಡ್ಡನವರ, ಮಾಬೂಬಿ ನದಾಫ ಮುಂತಾದವರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 