ರಾಮ ಮಂದಿರದಲ್ಲಿ ವಿಜ್ರಂಭಣೆಯಿಂದ ಆಚರಿಸಿದ ಕೃಷ್ಣಾಷ್ಠಮಿ
Krishna Ashtami celebrated with grandeur at Ram Mandir
ಅಥಣಿ, 19 ; ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಅಥಣಿ ಶ್ರೀರಾಮ ಮಂದಿರದಲ್ಲಿ ಬಾಲ ಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಸುಮಂಗಲೆಯರು ಹಾಡು ಹಾಡಿ ಅಲಂಕೃತ ತೊಟ್ಟಿಲು ತೂಗಿದರು. ವಿವಿಧ ಹೂ ಮತ್ತು ಹೂ ಮಾಲೆಗಳಿಂದ, ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿದ ಕೃಷ್ಣ ಮತ್ತು ರಾಧೆಯ ಮೂರ್ತಿಗಳನ್ನು ಅಲಂಕೃತ ವೇದಿಕೆ ಮೇಲಿಟ್ಟು ಭಕ್ತಿಯಿಂದ ಪೂಜಿಸಿದರು.
ವೇದಿಕೆ ಮೇಲೆ ಕೃಷ್ಣನಿಗೆ ಇಷ್ಟವಾದ ಬೆಣ್ಣೆ, ಹಣ್ಣು, ಹಾಲು, ಮೊಸರು, ಶುಂಠಿ, ಸಕ್ಕರೆ ಇಟ್ಟು ನೈವೆದ್ಯ ತೋರಿಸಿದರು. ಕೃಷ್ಣಾಷ್ಠಮಿ ನಿಮಿತ್ಯ ಭಜನೆ ಪದಗಳನ್ನು ಹಾಡಿದರು. ವೇದಿಕೆ ಮೇಲೆ ವಸುದೇವ, ದೇವಕಿ, ಬಲರಾಮರ ಚಿಕ್ಕ ಚಿಕ್ಕ ಮೂರ್ತಿಗಳನ್ನಿಟ್ಟು ಪುಟ್ಟ ಗೋಕುಲವನ್ನೇ ನಿರ್ಮಾಣ ಮಾಡಿದ್ದರು.
ಮರುದಿನ ಪಾರಣಿಯಂದು ಸಂಜೆ ಹಾಡು, ಭಜನೆ ಮಾಡಿ ಕೋಲಾಟ ಆಡಿ ಕುಣಿದು ಕುಪ್ಪಳಿಸಿ ಹಾಲು, ಮೊಸರು, ಬೆಣ್ಣೆಯಿಂದ ತುಂಬಿದ್ದ ಗಡಿಗೆಯನ್ನು ಒಡೆಯುವ ಮೂಲಕ ಗೋಪಾಳ ಕಾವಲಿ ಆಚರಿಸಿ ವಿಜ್ರಂಭಿಸಿದರು. ಕೃಷ್ಣಾಷ್ಠಮಿ ಕಾರ್ಯಕ್ರಮಗಳೆಲ್ಲವು ಲಕ್ಷ್ಮಣ ರಾಮದಾಸಿ, ಕ್ಷಮಾ ರಾಮದಾಸಿ ನೇತೃತ್ವದಲ್ಲಿ ನಡೆದವು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 