ರಾಮ ಮಂದಿರದಲ್ಲಿ ವಿಜ್ರಂಭಣೆಯಿಂದ ಆಚರಿಸಿದ ಕೃಷ್ಣಾಷ್ಠಮಿ
Krishna Ashtami celebrated with grandeur at Ram Mandir
ಅಥಣಿ, 19 ; ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಅಥಣಿ ಶ್ರೀರಾಮ ಮಂದಿರದಲ್ಲಿ ಬಾಲ ಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ಸುಮಂಗಲೆಯರು ಹಾಡು ಹಾಡಿ ಅಲಂಕೃತ ತೊಟ್ಟಿಲು ತೂಗಿದರು. ವಿವಿಧ ಹೂ ಮತ್ತು ಹೂ ಮಾಲೆಗಳಿಂದ, ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿದ ಕೃಷ್ಣ ಮತ್ತು ರಾಧೆಯ ಮೂರ್ತಿಗಳನ್ನು ಅಲಂಕೃತ ವೇದಿಕೆ ಮೇಲಿಟ್ಟು ಭಕ್ತಿಯಿಂದ ಪೂಜಿಸಿದರು.
ವೇದಿಕೆ ಮೇಲೆ ಕೃಷ್ಣನಿಗೆ ಇಷ್ಟವಾದ ಬೆಣ್ಣೆ, ಹಣ್ಣು, ಹಾಲು, ಮೊಸರು, ಶುಂಠಿ, ಸಕ್ಕರೆ ಇಟ್ಟು ನೈವೆದ್ಯ ತೋರಿಸಿದರು. ಕೃಷ್ಣಾಷ್ಠಮಿ ನಿಮಿತ್ಯ ಭಜನೆ ಪದಗಳನ್ನು ಹಾಡಿದರು. ವೇದಿಕೆ ಮೇಲೆ ವಸುದೇವ, ದೇವಕಿ, ಬಲರಾಮರ ಚಿಕ್ಕ ಚಿಕ್ಕ ಮೂರ್ತಿಗಳನ್ನಿಟ್ಟು ಪುಟ್ಟ ಗೋಕುಲವನ್ನೇ ನಿರ್ಮಾಣ ಮಾಡಿದ್ದರು.
ಮರುದಿನ ಪಾರಣಿಯಂದು ಸಂಜೆ ಹಾಡು, ಭಜನೆ ಮಾಡಿ ಕೋಲಾಟ ಆಡಿ ಕುಣಿದು ಕುಪ್ಪಳಿಸಿ ಹಾಲು, ಮೊಸರು, ಬೆಣ್ಣೆಯಿಂದ ತುಂಬಿದ್ದ ಗಡಿಗೆಯನ್ನು ಒಡೆಯುವ ಮೂಲಕ ಗೋಪಾಳ ಕಾವಲಿ ಆಚರಿಸಿ ವಿಜ್ರಂಭಿಸಿದರು. ಕೃಷ್ಣಾಷ್ಠಮಿ ಕಾರ್ಯಕ್ರಮಗಳೆಲ್ಲವು ಲಕ್ಷ್ಮಣ ರಾಮದಾಸಿ, ಕ್ಷಮಾ ರಾಮದಾಸಿ ನೇತೃತ್ವದಲ್ಲಿ ನಡೆದವು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 