ಕೊವಿದ್-19: 200ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ ಮಾರಿ, ಅಮೆರಿಕದಲ್ಲಿ ಒಂದೇ ದಿನದಲ್ಲಿ 884 ಜನರು ಸಾವು
ಬೀಜಿಂಗ್, ಏಪ್ರಿಲ್ 2,ಜಗತ್ತು ಈಗ ಕೊವಿದ್-19 ವಿರುದ್ಧದ ಯುದ್ಧದಲ್ಲಿದ್ದು, ಈ ಹಿಂದೆ ಎಲ್ಲೂ ಕಂಡು ಬರದಿದ್ದ ಹೊಸ ಕರೋನವೈರಸ್ ನಿಂದ ಹರಡಿದ ಮಾರಕ ರೋಗ 200 ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ವಿವಿಧ ದೇಶಗಳಲ್ಲಿ ನವೀಕೃತ ಮಾಹಿತಿ ಕೆಳಕಂಡಂತಿದೆ.
ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿದ್-19 ನಿಂದ 884 ಜನರು ಸಾವನ್ನಪ್ಪಿದ್ದು, ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಸಾವಿನ ಪ್ರಮಾಣವಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬುಧವಾರ ಸಂಜೆ ತಿಳಿಸಿದೆ.ಅಮೆರಿಕದಲ್ಲಿ ಇದುವರೆಗೆ ಕೊವಿದ್-19 ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 4,757ಕ್ಕೆ ತಲುಪಿದೆ.ಕ್ಯಾನ್ಬೆರಾ: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಕೊವಿದ್-19 ಸೋಂಕಿಗೆ ಲಸಿಕೆಗಳನ್ನು ಪರೀಕ್ಷಿಸಲಾರಂಭಿಸಿದ್ದಾರೆ.ಮೆಲ್ಬೋರ್ನ್ನ ನೈರುತ್ಯ ದಿಕ್ಕಿಗೆ 75 ಕಿಲೋಮೀಟರ್ ದೂರದಲ್ಲಿರುವ ಗೀಲಾಂಗ್ನಲ್ಲಿರುವ ಆಸ್ಟ್ರೇಲಿಯಾ ಪ್ರಾಣಿ ಆರೋಗ್ಯ ಪ್ರಯೋಗಾಲಯದಲ್ಲಿ (ಎಎಎಚ್ಎಲ್) ಮೊದಲ ಹಂತದ ಪರೀಕ್ಷೆಯನ್ನು ಆರಂಭಿಸಲಾಗಿದೆ ಎಂದು ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್ಐಆರ್ಒ) ಗುರುವಾರ ಪ್ರಕಟಿಸಿದೆ.
ಕೇಪ್ ಟೌನ್: ದಕ್ಷಿಣ ಆಫ್ರಿಕಾ ದೇಶಾದ್ಯಂತ ಹೆಚ್ಚಿನ ಪ್ರಕರಣಗಳು ವರದಿಯಾಗಿರುವುದರಿಂದ ಪರೀಕ್ಷೆಗಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಬುಧವಾರ ಆ ದೇಶದಲ್ಲಿ ಕೊವಿದ್-19 ಗಾಗಿ ಹತ್ತಾರು ಸಂಚಾರಿ ಮಾದರಿ ಪರೀಕ್ಷೆಗಳ ಘಟಕಗಳಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಯೋಗಾಲಯ 60 ಸಂಚಾರಿ ಮಾದರಿ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಘಟಕಗಳನ್ನು ದೇಶಾದ್ಯಂತ ನಿಯೋಜಿಸಿದೆ. ಈ ಮೂಲಕ ವೈದ್ಯಕೀಯ ಕಾರ್ಯಕರ್ತರು ಕೊವಿದ್-19 ಸೋಂಕು ನಾಗರಿಕರಲ್ಲಿ ಪರೀಕ್ಷಿಸುತ್ತಿದ್ದಾರೆ ಎಂದು ಎಂದು ಆರೋಗ್ಯ ಸಚಿವ ಜ್ವೆಲಿ ಮೈಕಿಜ್ ಹೇಳಿದ್ದಾರೆ.
ರಿಯೊ ಡಿ ಜನೈರೊ: ಬ್ರೆಜಿಲ್ ನ ಜನಸಂಖ್ಯೆಯಲ್ಲಿ ಕೊವಿದ್-19 ಸೋಂಕುಗಳನ್ನು ವ್ಯವಸ್ಥಿತವಾಗಿ ಪತ್ತೆ ಮಾಡುವ ಹೊಸ ಉಪಕ್ರಮವನ್ನು ಬ್ರೆಜಿಲ್ ಸರ್ಕಾರ ಬುಧವಾರ ಅನಾವರಣಗೊಳಿಸಿದೆ.
ಆರೋಗ್ಯ ಸಚಿವಾಲಯ 125 ದಶಲಕ್ಷ ಜನರಿಗೆ (ಜನಸಂಖ್ಯೆಯ ಶೇ 60ರಷ್ಟು) ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಕಾರ್ಯಕ್ರಮ ಇದಾಗಿದೆ.
ವಾಷಿಂಗ್ಟನ್: ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಹೊಸ ಅಂಕಿ-ಅಂಶಗಳ ಪ್ರಕಾರ, ಅಮೆರಿಕ 2 ಲಕ್ಷಕ್ಕೂ ಕ್ಕೂ ಹೆಚ್ಚು ಕೊವಿದ್-19 ಸೋಂಕುಗಳನ್ನು ಹೊಂದಿರುವ ಮೊದಲ ರಾಷ್ಟ್ರವೆನಿಸಿದೆ.ಬುಧವಾರ ಮಧ್ಯಾಹ್ನದ ವೇಳೆಗೆ ಒಟ್ಟು 2,03,608 ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 4,476ಕ್ಕೆ ಏರಿದೆ ಎಂದು ವಿಶ್ವವಿದ್ಯಾಲಯ ನವೀಕರಿಸಿದ ಮಾಹಿತಿ ಸಂಚಿಕೆಯಲ್ಲಿ ತಿಳಿಸಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 