ರಾಜ್ಯ ಮಾಧ್ಯಮ ಪ್ರಶಸ್ತಿಗೆ ಜೋಶಿ ಆಯ್ಕೆ

ಗುಳೇದಗುಡ್ಡ 24:   ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ಇವರು ಪತ್ರಿಕೊದ್ಯಮದಲ್ಲಿ ಸಾಧನೆ ಮಾಡಿರುವ ನಾಡಿನ ಹಿರಿಯ ಪತ್ರಕರ್ತರಿಗೆ ನೀಡುವ ‘ರಾಜ್ಯ ಮಾಧ್ಯಮ ಸೇವಾ ರತ್ನ’ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಹಿರಿಯ ಪತ್ರಕರ್ತ ಸಿ.ಎಂ.ಜೋಶಿ ಆಯ್ಕೆಯಾಗಿದ್ದಾರೆ.  

ಸುಮಾರು ಮೂವತ್ತೈದು ವರ್ಷಗಳಿಂದ ನಾಡಿನ ವಿವಿಧ ಪತ್ರಿಕೆಗಳಿಗೆ ಅಂಕಣಕಾರರಾಗಿ, ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಇವರು ರಂಗಭೂಮಿ, ಸಾಹಿತ್ಯ, ಪಠ್ಯ ರಚನೆ, ಕಾವ್ಯ, ಅಭಿನಯ, ನಿರ್ದೇಶನ ಹೀಗೆ ಹಲವಾರು ಕ್ಷೇತ್ರಗಳಲ್ಲಿ  ತೊಡಗಿಸಿಕೊಂಡಿರುವ ಇವರಿಗೆ ಹಲವಾರ ಪ್ರಶಸ್ತಿಗಳೂ ಲಭಿಸಿವೆ.  

ಡಿ. 27ರಂದು ಬೆಂಗಳೂರಿನ ಮಲ್ಲೇಶ್ವರಂ ಚೌಡಯ್ಯ ಮೆಮೋರಿಯಲ್  ಹಾಲ್‌ನಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನಿಧ್ಯವನ್ನು ಮಹರ್ಷಿ ಡಾ.ಆನಂದ ಗುರೂಜಿ ವಹಿಸಿಕೊಳ್ಳಲಿದ್ದಾರೆ. ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ.ಎಸ್‌. ನಾಗಾಭರಣ ಹಾಗೂ ಅಂತರಾಷ್ಟ್ರೀಯ ಸಂಸ್ಥೆಯಾದ ಆಕಾರ್ ಮ್ಯಾಕ್ಸ್‌ ಎಂ.ಡಿ. ಸ್ನೇಹ ರಾಕೇಶ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.