ಕಿಷ್ಕಿಂಧಾ-ಗಂಗಾವತಿ ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಠಿ ಸಾಧ್ಯ:ಪ್ರೊ. ಕರಿಗೂಳಿ

ಗಂಗಾವತಿ 17:ವಿಶ್ವದ ಬಹುತೇಕ ದೇಶಗಳು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿವೆ .ಪ್ರವಾಸೋದ್ಯಮ ಬದಲಾಗುತ್ತಿರುವ ಕ್ಷೇತ್ರವಾಗಿದ್ದು ಇದಕ್ಕೆ ಭಾರತೀಯ ಪ್ರವಾಸೋದ್ಯಮ ಹೊಂದಿಕೊಂಡರೆ ಮಾತ್ರ ಆರ್ಥಿಕ ಲಾಭವಾಗುತ್ತದೆ .ಕಿಷ್ಕಿಂಧಾ ಗಂಗಾವತಿ ಪ್ರವಾಸೋದ್ಯಮದಿಂದ  ನೇರ ಮತ್ತು ಪರೋಕ್ಷ ಉದ್ಯೋಗ ಲಭಿಸಿ ಆರ್ಥಿಕ ಸದೃಢತೆ ಸಾಧ್ಯವಾಗುತ್ತದೆ ಎಂದು ಪ್ರೊ. ಎಸ್ .ಕರಿಗೂಳಿ ಹೇಳಿದರು.

ಅವರು ನಗರದ ಶ್ರೀ ಕೃಷ್ಣದೇವರಾಯ ಕಲಾಭವನದಲ್ಲಿ ಸರ್ವಾಂಗಿಯಣ ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಪ್ರವಾಸೋದ್ಯಮ ಮತ್ತು ಭವಿಷ್ಯದ ಗಂಗಾವತಿ ಎನ್ನುವ ವಿಷಯದ ಕುರಿತು ಮಾತನಾಡಿದರು.ಗಂಗಾವತಿ ಐತಿಹಾಸಿಕವಾದ ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದು ಇವುಗಳು ರಾಮಾಯಣ ಮಹಾಭಾರತ ಸೇರಿದಂತೆ ಭಾರತದ ಪವಿತ್ರ ಗ್ರಂಥಗಳಲ್ಲಿ ಪ್ರಸ್ತಾಪವಾಗಿರುವ ಸ್ಥಳಗಳಾಗಿವೆ. ಆದ್ದರಿಂದ ವಿಶ್ವದ ಪ್ರವಾಸಿ ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿರುವುದರಿಂದ ಹಲವು ದಶಕಗಳಿಂದ ಇಲ್ಲಿಗೆ ದೇಶ ವಿದೇಶದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು ಇದರಿಂದ ನೇರ ಪರೋಕ್ಷ ಉದ್ಯೋಗ ಸೃಷ್ಟಿಯಾಗಿ ಹಾರ್ದಿಕ ಶಕ್ತಿ ಬರುತ್ತಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಆನೆಗೊಂದಿ ಭಾಗ ಸೇರಿದಂತೆ ಕಿಷ್ಕಿಂಧಾ ಅಂಜನಾದ್ರಿ ಹೇಮಗುಡ್ಡ ಹಳೆ ಶಿಲಾಯುಗದ ಮೋರ್ಯರ ಬೆಟ್ಟ, ಕುಮ್ಮಟದುರ್ಗ ಈ ಸ್ಥಳಗಳನ್ನು ಅಭಿವೃದ್ಧಿ ಮಾಡುವ ಮೂಲಕ ವಿಶ್ವಕ್ಕೆ ಇನ್ನಷ್ಟು ಮಾಹಿತಿ ನೀಡಬೇಕಿದೆ ಪ್ರಾಕೃತಿಕ ಆನೆಗುಂದಿ ಸಾಣಾಪೂರ ಭಾಗದಲ್ಲಿರುವ ಪ್ರಾಕೃತಿಕ ಬೆಟ್ಟಗಳ ಸೌಂದರ್ಯವನ್ನು ಜಗತ್ತಿಗೆ ಪ್ರಚೋದಪಡಿಸಬೇಕಿದ್ದು ತುಂಗಭದ್ರ ನದಿಯಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಫಾಲ್ಸ್‌ ಗಳನ್ನು ಸಾಮಾಜಿಕ ಜಾಲತಾಗಳಲ್ಲಿ ಹಾಕುವ ಮೂಲಕ ಪ್ರಚಾರ ನೀಡಬೇಕಿದೆ. ಪ್ರವಾಸೋದ್ಯಮ ಆಧುನಿಕವಾಗಿ ಬೆಳವಣಿಗೆ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರ ಸಾಂಸ್ಕೃತಿಯ ಕ್ಷೇತ್ರ ಒಳಗೊಂಡಂತೆ ರೆಸಾರ್ಟ್‌ ಗಳನ್ನು ಆಧುನಿಕವಾಗಿ ಸಿದ್ಧಪಡಿಸಬೇಕಿದೆ. ಅಕ್ರಮವಾಗಿ ನಡೆಯುವ ರೆಸಾರ್ಟ್‌ ಹೋಟೆಲ್ ಉದ್ಯಮಗಳನ್ನು ಕಾನೂನು ಬದ್ಧಗೊಳಿಸಿ ಅಕ್ರಮ ಚಟುವಟಿಕೆ ತಡೆಯಬೇಕಿದೆ. ಇದರಿಂದ ಕಿಷ್ಕಿಂಧಾ ಅಂಜನಾದ್ರಿ ಸುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯವಾಗುತ್ತದೆ ಪ್ರವಾಸೋದ್ಯಮ ಕ್ಷೇತ್ರಗಳಿಗೆ ರಸ್ತೆ ಸಂಪರ್ಕ, ರೈಲ್ವೆ ಸಂಪರ್ಕ ಸೇರಿದಂತೆ ವಿಮಾನ ಸಂಪರ್ಕವನ್ನು ಜೋಡಿಸಬೇಕಿದೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ ಸ್ಥಳೀಯ ಸಂಸ್ಕೃತಿಕ ನೀಡುವ ಮೂಲಕ ನೇರ ಪರೋಕ್ಷ ಉದ್ಯೋಗ ಸೃಷ್ಟಿ ಮಾಡಿ ಗಂಗಾವತಿಯನ್ನು ಆರ್ಥಿಕ ಶಕ್ತಿ ಬರುವಂತೆ ಮಾಡಬೇಕಿದೆ. ಈ ಹಿಂದೆ ಅಧಿಕ ಭತ್ತವನ್ನು ಬೆಳೆಯುವ ಮೂಲಕ ಭತ್ತದ ಕಣಜ ಎಂದು ಗಂಗಾವತಿಯನ್ನು ಗುರುತಿಸಲಾಗುತ್ತಿತ್ತು ಜಾಗತೀಕರಣದ ಪರಿಣಾಮ ಎಲ್ಲೆಡೆ ಭತ್ತವನ್ನು ಬೆಳೆಯಲಾಗುತ್ತಿದೆ .ಆದ್ದರಿಂದ ಗಂಗಾವತಿ ಸುತ್ತಮುತ್ತ ಇದ್ದ 180ಕ್ಕೂ ಹೆಚ್ಚು ರೈಸ್ ಮಿಲ್ ಗಳು ಮುಚ್ಚುವ ಸ್ಥಿತಿಯಲ್ಲಿದ್ದು ಅವುಗಳಿಗೆ ಆಧುನಿಕ ಟಚ್ ನೀಡುವ ಮೂಲಕ ಬೆಳೆಸಬೇಕಿದೆ. ಇದರಿಂದ ರೇಸ್ ಮಿಲನ್ ಗಳನ್ನು ನಂಬಿಕೊಂಡಿದ್ದ ರೈಸ್ ಮಿಲ್ಲುಗಳನ್ನು ನಂಬಿಕೊಂಡಿದ್ದ ಕಾರ್ಮಿಕ ವಲಯಕ್ಕೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ.ಗಂಗಾವತಿ ರೈಲ್ವೆ ನಿಲ್ದಾಣದಿಂದ ಪ್ರವಾಸಿ ತಾಣಗಳ ಪರಿಚಯದ ನೇಮ್ ಪ್ಲೇಟ್ ಗಳನ್ನು ಅಳವಡಿಸಬೇಕು ಈಗಾಗಲೇ ವಿಶ್ವ ಪರಂಪರ ಪಟ್ಟಿಯಲ್ಲಿರುವ ಆನೆಗೊಂದಿ ಭಾಗವನ್ನು ಇನ್ನಷ್ಟು ಜಗತ್ತಿಗೆ ಪರಿಚಯಿಸುವ ಜೊತೆಗೆ ಮುಂಬರುವ ದಿನಗಳಲ್ಲಿ 3ಸಾವಿರ ವರ್ಷಗಳ ಹಿಂದಿನ ಶಿಲಾಯುಗದ ಜನರ ಮನೆ ಮತ್ತು ಸ್ಮಾರಕಗಳಿರುವ ಹಿರೇ ಬೆಣಕಲ್ ಮೋರ್ಯರ ಬೆಟ್ಟ ವಿಶ್ವ ಪರಂಪರೆ ಪಟ್ಟಿಗೆ ಸೇರುವ ಸಾಧ್ಯತೆಯಿದ್ದು ಇಲ್ಲಿಗೆ ಹೋಗಲು ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ಪ್ರಸ್ತಾರ ಪ್ರಸ್ತಾವನೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

ಈ ಎಲ್ಲಾ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರವಾಸೋದ್ಯಮವನ್ನು ಲಾಭದಾಯಕವಾಗಿ ಬಳಕೆ ಮಾಡಿ ನೇರ ಪರೋಕ್ಷ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಯುವ ಜನರಿಗೆ ಯುವಜನರು ಗುಳೆ ಹೋಗದಂತೆ ತಡೆದು ಸ್ಥಳೀಯವಾಗಿ ಆರ್ಥಿಕ ಸಾಧನೆ ಮಾಡಲು ಸಾಧ್ಯವಾಗುವ ವಾತಾವರಣ ಸೃಷ್ಟಿ ಮಾಡಬೇಕು ಎಂದರು. ಶಾಸಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಗಂಗಾವತಿ ಕ್ಷೇತ್ರದಲ್ಲಿ ವಿಫಲ ಅವಕಾಶಗಳಿದ್ದು ಈಗಾಗಲೇ ಈ ಹಿಂದಿನ ಸರಕಾರ ಅಂಜನಾದ್ರಿ ಬೆಟ್ಟಕ್ಕೆ 120 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ರಸ್ತೆ, ಕುಡಿಯುವ ನೀರು ಸೇರಿ ಮೂಲಸೌಕರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯುವ ಮೂಲಕ ಹಾಲಿ ಶಾಸಕರು ಕಾರ್ಯ ಮಾಡಬೇಕಿದೆ.ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಅಡಿಯಲ್ಲಿ ಕೆಲ ನಿಯಮಗಳನ್ನು ಬದಲಾಯಿಸುವ ಮೂಲಕ ಅನಧಿಕೃತ ಹೋಟೆಲ್ ಗಳನ್ನು ಅಧಿಕೃತ ಮಾಡುವ ಅವಶ್ಯಕತೆ ಇದೆ ಎಂದರು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಮಾತನಾಡಿ ಪ್ರವಾಸೋದ್ಯಮದ ಮೂಲಕ ವಿಶ್ವದ ಅನೇಕ ದೇಶಗಳು ಆರ್ಥಿಕ ಸದೃಢತೆ ಹೊಂದಿದ್ದು ನಿಯಮಬದ್ಧವಾಗಿ ನಮ್ಮ ಭಾಗದಲ್ಲಿಯೂ ಹೋಟೆಲ್ ಸೇರಿದಂತೆ ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸೋದ್ಯಮ ಗಳಿಸಬೇಕೆಂದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ನಾಗರಾಜ ಗುತ್ತೇದಾರ ಮತದಾನದ ಮಹತ್ವ ಕೃತಿ ಮಾತನಾಡಿದರು.ಕಾರ್ಯಕ್ರಮದಲ್ಲಿ  ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ್ ಮೇಗಳಮನಿ,ದಲಿತ ಮುಖಂಡ ಹಂಪೇಶ ಅರಿಗೋಲು,ನಗರಸಭೆಯ ಸದಸ್ಯ ನವೀನಕುಮಾರ,ಕರವೇ ರಾಜ್ಯಾಧ್ಯಕ್ಷ ಅರ್ಜುನ ನಾಯಕ,ಈರಣ್ಣ ಬಡಿಗೇರ್,ಡಾ.ಶಿವಕುಮಾರ್ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ,ಸ್ವಾಭಿಮಾನ ಕರವೇ ಅಧ್ಯಕ್ಷ ರಾಜೇಶರೆಡ್ಡಿ  ಸೇರಿದಂತೆ ಸಮಿತಿಯ ಅನೇಕ ಪದಾಧಿಕಾರಿಗಳಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿಭೂತಿ ಗುಂಡಪ್ಪ ,ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ನಿಂಗಜ್ಜ, ಪೊಲೀಸ್ ಅಧಿಕಾರಿ ಶಾರದಮ್ಮ , ಮೈಲಾರ​‍್ಪ ,ಬಸವರಾಜ್ ,ರಂಗಭೂಮಿ ಕಲಾವಿದರಾದ ಜೀ.ವಂದನಾ,ಪತ್ರಕರ್ತ ನಾಗರಾಜ ಇಂಗಳಿ,ಬಿ.ಅಶೋಕ ಸೇರಿದಂತೆ ಹಲವು ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ವಿತರಿಸಲಾಯಿತು