ಜಶ್ನೆ ಈದ್ ಮಿಲಾದ್ ನಬಿ ಸೋ ಕಾರ್ಯಕ್ರಮ

ಸಿರುಗುಪ್ಪ 23: ನಗರದ ವಲ್ಲೂರು ಮಸ್ಜಿದ್ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ತಾಲೂಕು ಈದ್ ಮಿಲಾದ್ ಕಮಿಟಿ ಹಮ್ಮಿಕೊಂಡ ಜಶ್ನೆ ಈದ್ ಮಿಲಾದ್ ನಬಿ ಸೋ ಕಾರ್ಯಕ್ರಮದಲ್ಲಿ ಬಿಜಾಪುರಿನ ಬುಲ್ಬುಲೇ ಬಾಗ್ ಮದೀನಾ ಮೊಹಮ್ಮದ್ ಹನೀಫ್ ರಜಾ ಅವರು ಕಾರ್ಯಕ್ರಮದಲ್ಲಿ ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯ ಶಾಂತಿಯನ್ನು ಬಯಸುತ್ತಾನೆ. ಅರೇಬಿಕ್ ನಲ್ಲಿ ಇಸ್ಲಾಂ ಎಂದರೆ ಶಾಂತಿ ಮುಸ್ಲಿಂ ಎಂದರೆ ಶಾಂತಿಗಾಗಿ ತಮ್ಮನ್ನು ಅರ​‍್ಿಸಿಕೊಂಡವರು. ಅಲ್ಲಾಹನ ನಾಮ ಸ್ಮರಣೆಯಿಂದ ಶಾಂತಿ ಪಡೆಯಬಹುದು. ಹಜರತ್ ಮೊಹಮ್ಮದ್ ಪೈಗಂಬರ್ ಸೋ ಅವರ ಜಗತ್ತಿನ ಶಾಂತಿಗಾಗಿ ಪ್ರತಿಯೊಬ್ಬರು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರೆ ಕೊಟ್ಟರು. 

 ಹಜರತ್ ಗಡ್ಡೆ, ಖಾದರ್ ಭಾಷಾ ಖಾದ್ರಿ ಬಾಗ್ದಾದಿ ಮುಕುಂದ ಷರೀಫ್ ದರ್ಗಾದ ಸಜ್ಜಾದ ನಷಿನ್ ಹಸನ್ ಬಸ್ರಿ ಖಾದ್ರಿ ಬಾಗ್ದಾದಿ ಸಾಹೇಬ್ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ದುಆ ಮಾಡಿದರು. ಕುರಾನ್ ಕಿರಾತ ಸಲಾತೋ ಸಲಾಂ ಫಾತೆಹಾ ಖಾನಿ ಕಾರ್ಯಕ್ರಮದಲ್ಲಿ ಹಾಫೀಜ್ ನೂರುಲ್ ಹಕ್ ಹಾಫೀಜ್ ಮೊಹಮ್ಮದ್ ಶರೀಫ್ ಹಾಫೀಜ್ ಜಿ ಲುಕ್ಮಾನ್ ಮೌಲಾನ ಎಸ್ ಅಬ್ದುಲ್ ಸಮದ್ ಸೈಯದ್ ಮಹೆಬೂಬ್ ಪೀರ್ ಖಾದ್ರಿ ಹಾಜಿ ಚೌದ್ರಿ ಖಾಜಾ ಸಾಬ್ ಹಾಜಿ ಅಬ್ದುಲ್ ನಬಿ ಹಾಜಿ ಜಿ ಅನ್ವರ್ ಸಾಬ್  ಅನ್ಸಾರಿ ಗೌಸ್ ಲ್ ಆಜಂ ಮುಲ್ಲಾ ಕಲಿಮ್ ಮುಲ್ಲಾ ದಾದಾ ಕಲಂದರ್ ಮೊಹಮ್ಮದ್ ನೌಷಾದ್ ಅಲಿ ಶಶಾವಲಿ ಅನ್ವರ್ ಶಬ್ಬೀರ್ ಖಾದರ್ ಇನಾಯತ್ ಟೈಲರ್ ಜಿ ಖಾಜಾ ಉಪಸ್ಥಿತರಿದ್ದರು. ಸರ್ವರಿಗೂ ಪ್ರಸಾದ ವಿತರಿಸಲಾಯಿತು