ಜಮಖಂಡಿ : ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ
Jamkhandi: Young man stabbed and attacked with a knife
ಲೋಕದರ್ಶನ ವರದಿ,
ಜಮಖಂಡಿ 20 : ನಗರದ ಮಟ್ಟನ್ ಮಾರ್ಕೆಟ್ ಬಳಿ ಯುವಕನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಜರುಗಿದೆ. ರಾತ್ರಿ ಸಮಯದಲ್ಲಿ ಮುಸ್ಲಿಂ ಯುವಕರ ನಡುವೆ ಜಗಳ- ಗಲಾಟೆ ಶುರುವಾಗಿದ್ದು. ಅಲ್ಲಿಗೆ ಕೆಲವಂದಿಂಷ್ಟು ಹಿಂದು ಯುವಕರ ಸಹ ಸೇರಿದ್ದಾರೆ. ಹಿಂದು ಯುವಕರ ಮಧ್ಯ ಮುಸ್ಲಿಂ ಯುವಕರ ನಡುವೆ ಹೊಡೆದಾಟ ತೀವ್ರ ಸ್ವರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಹನುಮಂತ ಶಿವಾಜಿ ಗಾಡಿವಡ್ಡರ (18) ಯುವಕನಿಗೆ ಮುಸ್ಲಿಂ ಯುವಕರು ಸೇರಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಚಾಕುವಿನಿಂದ ಇರಿತಕ್ಕೆಗೊಳಗಾದ ಹನುಮಂತ ಶಿವಾಜಿ ಗಾಡಿವಡ್ಡರ ಯುವಕನನ್ನು ಜಮಖಂಡಿ ಸರಕಾರಿ ಉಪವಿಭಾಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಶಹರ ಪೋಲಿಸ್ ಠಾಣೆಯ ಪಿಎಸ್ಐ, ಅನೀಲ ಕುಂಬಾರ, ಸಿಬಂಧಿಗಳಾದ ಸದಾಶಿವ ಹೊಸೂರ, ಲೋಕೇಶ ಯಳಶೆಟ್ಟಿ, ಶಕಂರ ಆಸಂಗಿ, ಶೇಖರ ನಾಯಕ, ಶಂಕರ ಮೂಲಿಮನಿ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 