ಗ್ರಾಮೀಣ ಕ್ರೀಡೆಗೆ ಜೆ ಎಸ್ ಡಬ್ಲ್ಯೂ ಪ್ರೋತ್ಸಾಹ
JSW encourages rural sports
ಬಳ್ಳಾರಿ 13: ಜೆಎಸ್ಡಬ್ಲ್ಯೂ ಫೌಂಡೇಶನ್ ಇತ್ತೀಚೆಗೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ "ಟೈಗರ್ 11 ಯೂತ್ ಕ್ರಿಕೆಟ್ ಪಂದ್ಯಾವಳಿ"ಯನ್ನು ಆಯೋಜಿಸಿತು. ಈ ಕಾರ್ಯಕ್ರಮಗಳು ಗ್ರಾಮೀಣ ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಉತ್ತೇಜಿಸುವ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.
ಜೆ ಎಸ್ ಡಬ್ಲ್ಯೂ ಫೌಂಡೇಶನ್ ಕ್ರಿಕೆಟ್ ಟ್ರೋಫಿಗಳು, ಪದಕಗಳು, ಕಪ್ಗಳು ಮತ್ತು ಸಮವಸ್ತ್ರಗಳನ್ನು ಒದಗಿಸುವ ಮೂಲಕ ಪಂದ್ಯಾವಳಿಯನ್ನು ಬೆಂಬಲಿಸಿತುಒಟ್ಟು 10 ತಂಡಗಳ 150 ಯುವಕರು ಬಾಗವಹಿಸಿದ್ದು, ಟೈಗರ್ 11 ತೋರಣಗಲ್ಲು (ಸ್ಟೇಷನ್) ಪ್ರಥಮ, ತೋರಣಗಲ್ಲು ಗ್ರಾಮದ ರನ್ ರೈಟರ್ಸ್ ದ್ವಿತೀಯ ಬಹುಮಾನ ಪಡೆಯಿತು. ವಡ್ಡು, ಬನ್ನಿಹಟ್ಟಿ, ತಾರಾನಗರ, ಸಂಡೂರು, ಕುಡುತಿನಿ, ಯಶವಂತನಗರ ಮುಂತಾದ ಗ್ರಾಮಗಳ ಯುವಕರು ಭಾಗವಹಿಸಿದ್ದರು.ತೋರಣಗಲ್ಲು ಕಾಂಗ್ರೆಸ್ ಮುಖಂಡರಾದ ಜಿ ಸಿ ಬಿ ರಾಮಾಂಜಿನಿ ಹಾಗೂ ಕುರೇಕುಪ್ಪ ಟೌನ್ ಪುರಸಭೆ ಉಪಾಧ್ಯಕ್ಷ ನಾರಾಯಣ . ಜೆಎಸ್ಡಬ್ಲ್ಯೂ ಫೌಂಡೇಶನ್ ಕ್ರೀಡಾ ವಿಭಾಗದ ಸಂಯೋಜನಾಧಿಕಾರಿ ಮಹಮ್ಮದ್ ರಫೀಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಟ್ರೋಫಿಗಳು, ಕಪ್ಗಳು ಮತ್ತು ಪದಕಗಳನ್ನು ವಿತರಿಸಿದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 