ಒಳ್ಳೆಯ ಜೀವನ ಶೈಲಿಯಿಂದ ದೀಘರ್ಾಯುಷಿಗಳಾಗಿ ಬದುಕಲು ಸಾಧ್ಯ: ಬಡೇಸಗೋಳ
ಆರೋಗ್ಯ ಇಲಾಖೆಯ ನಿವೃತ್ತರ ಹಿತವರ್ಧಕ ಸಂಘದಿಂದ 75 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಿವೃತ್ತ ಆರೋಗ್ಯ ಇಲಾಖೆಯವರನ್ನು ಸನ್ಮ
ಗೋಕಾಕ 09: ಒಳ್ಳೆಯ ಜೀವನ ಶೈಲಿಯಿಂದ ಉತ್ತಮ ಆರೋಗ್ಯವಂತರಾಗಿ ದೀರ್ಘಾ ಯುಷಿಗಳಾಗಿ ಬದುಕಲು ಸಾಧ್ಯವೆಂದು ನಿವೃತ್ತ ವೈಧ್ಯ ಡಾ. ಉದಯ ಬಡೇಸಗೋಳ ಹೇಳಿದರು.
ರವಿವಾರದಂದು ಬಸವ ಮಂದಿರದಲ್ಲಿ ಆರೋಗ್ಯ ಇಲಾಖೆಯ ನಿವೃತ್ತರ ಹಿತವರ್ಧಕ ಸಂಘ ಗೋಕಾಕ ಇವರು ಹಮ್ಮಿಕೊಂಡ 75 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಿವೃತ್ತ ಆರೋಗ್ಯ ಇಲಾಖೆಯವರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧ್ಯಾತ್ಮಿಕ, ಯೋಗ, ವಾಯುವಿಹಾರ, ಸಮತೋಲನ ಆಹಾರ ಹಾಗೂ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಿ. ತಮ್ಮ ಮಕ್ಕಳಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ತಿಳಿಸಿ ಅವರಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಜನತೆಯ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಇಲಾಖೆಯವರ ಪಾತ್ರ ಮಹತ್ವದ್ದು. ಸೇವಾ ಮನೋಭಾವನೆಯಿಂದ ಜನತೆಗೆ ಆರೋಗ್ದ ಮಾಹಿತಿ ನೀಡಿ, ಆರೋಗ್ಯವಂತ ಸಮಾಜ ನಿಮರ್ಿಸಲು ಶ್ರಮಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ಅಶೋಕ ಮುರಗೋಡ ವಹಿಸಿದ್ದರು.
ವೇದಿಕೆ ಮೇಲೆ ಡಾ. ಎಮ್.ಬಿ.ಕರಕಣ್ಣವರ, ಡಾ. ಬಿ.ಎಸ್.ಮದಭಾಂವಿ, ಡಾ. ಎಸ್.ಎಮ್.ಹೊಸಮನಿ, ಬಿ.ಬಿ.ರಾಜಾಪೂರೆ ಇದ್ದರು.
ಡಾ. ಎಸ್.ಜಿ.ಪಂಡಿತ ಸ್ವಾಗತಿಸಿದರು. ಎಸ್.ಎಸ್.ಈರಗಾರ ನಿರೂಪಿಸಿದರು. ಡಿ.ಬಿ.ಜಿನರಾಳ ವಂದಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 