ಒಳ್ಳೆಯ ಜೀವನ ಶೈಲಿಯಿಂದ ದೀಘರ್ಾಯುಷಿಗಳಾಗಿ ಬದುಕಲು ಸಾಧ್ಯ: ಬಡೇಸಗೋಳ
ಆರೋಗ್ಯ ಇಲಾಖೆಯ ನಿವೃತ್ತರ ಹಿತವರ್ಧಕ ಸಂಘದಿಂದ 75 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಿವೃತ್ತ ಆರೋಗ್ಯ ಇಲಾಖೆಯವರನ್ನು ಸನ್ಮ
ಗೋಕಾಕ 09: ಒಳ್ಳೆಯ ಜೀವನ ಶೈಲಿಯಿಂದ ಉತ್ತಮ ಆರೋಗ್ಯವಂತರಾಗಿ ದೀರ್ಘಾ ಯುಷಿಗಳಾಗಿ ಬದುಕಲು ಸಾಧ್ಯವೆಂದು ನಿವೃತ್ತ ವೈಧ್ಯ ಡಾ. ಉದಯ ಬಡೇಸಗೋಳ ಹೇಳಿದರು.
ರವಿವಾರದಂದು ಬಸವ ಮಂದಿರದಲ್ಲಿ ಆರೋಗ್ಯ ಇಲಾಖೆಯ ನಿವೃತ್ತರ ಹಿತವರ್ಧಕ ಸಂಘ ಗೋಕಾಕ ಇವರು ಹಮ್ಮಿಕೊಂಡ 75 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಿವೃತ್ತ ಆರೋಗ್ಯ ಇಲಾಖೆಯವರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಆಧ್ಯಾತ್ಮಿಕ, ಯೋಗ, ವಾಯುವಿಹಾರ, ಸಮತೋಲನ ಆಹಾರ ಹಾಗೂ ಧನಾತ್ಮಕ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಿರಿ. ತಮ್ಮ ಮಕ್ಕಳಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ತಿಳಿಸಿ ಅವರಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಜನತೆಯ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಇಲಾಖೆಯವರ ಪಾತ್ರ ಮಹತ್ವದ್ದು. ಸೇವಾ ಮನೋಭಾವನೆಯಿಂದ ಜನತೆಗೆ ಆರೋಗ್ದ ಮಾಹಿತಿ ನೀಡಿ, ಆರೋಗ್ಯವಂತ ಸಮಾಜ ನಿಮರ್ಿಸಲು ಶ್ರಮಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ಅಶೋಕ ಮುರಗೋಡ ವಹಿಸಿದ್ದರು.
ವೇದಿಕೆ ಮೇಲೆ ಡಾ. ಎಮ್.ಬಿ.ಕರಕಣ್ಣವರ, ಡಾ. ಬಿ.ಎಸ್.ಮದಭಾಂವಿ, ಡಾ. ಎಸ್.ಎಮ್.ಹೊಸಮನಿ, ಬಿ.ಬಿ.ರಾಜಾಪೂರೆ ಇದ್ದರು.
ಡಾ. ಎಸ್.ಜಿ.ಪಂಡಿತ ಸ್ವಾಗತಿಸಿದರು. ಎಸ್.ಎಸ್.ಈರಗಾರ ನಿರೂಪಿಸಿದರು. ಡಿ.ಬಿ.ಜಿನರಾಳ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 