ಇಂಡಿಯನ್ ಕಾಫಿ ಹೌಸ್ ಕಾಫಿಯೊಂದಿಗೆ ಮಮತಾ ಜತೆ ಸಭೆ ನಡೆಸಬೇಕು: ರಾಜ್ಯಪಾಲರ ಬಯಕೆ
ಕೋಲ್ಕತಾ, 10 ,ಇಂಡಿಯನ್ ಕಾಫಿ ಹೌಸ್ ಸರಬರಾಜು ಮಾಡುವ ಕಾಫಿ ಗುಟುಕರಿಸುತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡನೆ ಎಲ್ಲಿ ಬೇಕಾದರೂ ಸಭೆ ನಡೆಸಲು ಸಿದ್ಧ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಸಭೆ ಹೇಳಿಕೊಂಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಪಾಲರು “ಕೋಲ್ಕತಾದ ಪ್ರಖ್ಯಾತ ಇಂಡಿಯನ್ ಕಾಫಿ ಹೌಸ್ನಲ್ಲಿ ರಕ್ತದಾನಿ ಸಂಘಟಕರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಕಾಫಿ ಕುಡಿದ ಕ್ಷಣಗಳನ್ನು ಮರೆಯುವಂತಿಲ್ಲ” ಎಂದಿದ್ದಾರೆ. ಅಲ್ಲದೆ, “ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡನೆ ಯಾವುದೇ ಸ್ಥಳದಲ್ಲಾದರೂ ಸಭೆ ಆಯೋಜಿಸಿ. ಇಂಡಿಯನ್ ಕಾಫಿ ಹೌಸ್ ಪೂರೈಸಿದ ಕಾಫಿಯೊಂದಿಗೆ ಮಾತುಕತೆ ನಡೆಸಲು ಸಿದ್ಧ” ಎಂದು ಹೇಳಿದ್ದಾರೆ. “ನಾನು ಪತ್ನಿಯೊಡನೆ ಇಂಡಿಯನ್ ಕಾಫಿ ಹೌಸ್ನ ಮೊದಲ ಮಹಡಿಯಲ್ಲಿ ಸ್ವಾಧಭರಿತ ಕಾಫಿ ಗುಟುಕರಿಸಿದ್ದೇನೆ. ಇಲ್ಲಿಗೆ ಕಾಫಿ ಪ್ರಿಯರು ಆಗಮಿಸಿ ಆನಂದಿಸಬಹುದು” ಎಂದೂ ಸಹ ರಾಜ್ಯಪಾಲ ಜಗದೀಪ್ ದಂಖರ್ ಟ್ವೀಟ್ ಮಾಡಿದ್ದಾರೆ.
-
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 