ಜಕೀರ್ ನಾಯಕ್ ಹಸ್ತಾಂತರಗೊಳಿಸಿ ಮಲೇಷ್ಯಾವನ್ನು ಮತ್ತೆ ಕೋರಿದ ಭಾರತ
Zakir Nayak
ನವದೆಹಲಿ,ಮೇ
14- ಮುಂಬೈ ಮೂಲದ ವಿವಾದಾಸ್ಪದ ಇಸ್ಲಾಂ ಪ್ರಚಾರಕ ಜಕೀರ್ ನಾಯಕ್ ನನ್ನು ತನಗೆ
ಹಸ್ತಾಂತರಿಸಬೇಕು ಎಂದು ಮಲೇಷ್ಯಾ ದೇಶವನ್ನು ಭಾರತ ಸರ್ಕಾರ ಮತ್ತೊಮ್ಮೆ ಕೋರಿದೆ.
ಮಲೇಷ್ಯಾ ಸರ್ಕಾರ ಭಾರತದ ಕೋರಿಕೆಯನ್ನು ಪರಿಶೀಲಿಸುತ್ತಿದೆ ಎಂದು ಅಲ್ಲಿನ
ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತದಲ್ಲಿ ಕೋಮು ಸೌಹಾರ್ದತೆಗೆ ಭಂಗತಂದು,
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಹ ಆರೋಪಗಳನ್ನು ಜಕೀರ್ ನಾಯಕ್
ಎದುರಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಮಲೇಷ್ಯದಲ್ಲಿ ನೆಲೆಸಿದ್ದಾರೆ.
2016 ಜುಲೈನಲ್ಲಿ ಢಾಕಾದಲ್ಲಿ ಹೋಲಿ ಆರ್ಟಿಸನ್ ಬೆಕರಿ ಕಫೆ ಮೇಲೆ ನಡೆಸಲಾದ
ಭಯೋತ್ಪಾದಕ ದಾಳಿಯಲ್ಲಿ ಓರ್ವ ಭಾರತೀಯ ಯುವತಿ ಸೇರಿ 20 ಮಂದಿ ವಿದೇಶಿಯರನ್ನು
ಅಮಾನುಷವಾಗಿ ಕತ್ತು ಸೀಳಿ ಹತ್ಯೆ ಗೈದ ಕೃತ್ಯಕ್ಕೆ ಸಂಬಂಧಿಸಿದಂತೆ ಇತ್ತ
ಭಾರತದಲ್ಲೂ, ಅತ್ತ ಬಾಂಗ್ಲಾ ದೇಶದಲ್ಲೂ ಜಕೀರ್ ನಾಯಕ್ ತನಿಖೆ ಎದುರಿಸುತ್ತಿದ್ದಾರೆ.
ರಷ್ಯಾದಲ್ಲಿ
ಕಳೆದ ವರ್ಷ ಸೆಪ್ಟಂಬರ್ ನಲ್ಲಿ ನಡೆದ 5ನೇ ಈಸ್ಟ್ ಎಕನಾಮಿಕ್ ಫೋರಂ ನಲ್ಲಿ
ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಆ ಸಂದರ್ಭದಲ್ಲಿ ಮಲೇಷ್ಯಾ ಪ್ರಧಾನಿ ಮಹಥೀರ್
ಮೊಹಮದ್ ಅವರನ್ನು ಭೇಟಿಯಾಗಿದ್ದರು. ಜಕೀರ್ ನಾಯಕ್ ಹಸ್ತಾಂತರ ವಿಷಯದಲ್ಲಿ ಉಭಯ
ಪ್ರಧಾನಿಗಳು ಸಭೆಯಲ್ಲಿ ಚರ್ಚೆಸಿದ್ದರು ಎಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿಜಯ್
ಗೋಖಲೆ ಸಹ ಈ ಹಿಂದೆ ಹೇಳಿದ್ದರು.
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ 