ನೂತನ ಬಿಜೆಪಿ ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬ್ಯಾಡಗಿ 21:  ಈ ಬಾರಿಯ ಲೋಕಸಭಾ ಚುನಾವಣೆಲ್ಲಿ ಬಿಜೆಪಿ 370 ಹಾಗೂ ಎನ್‌ಡಿಎ ಒಕ್ಕೂಟ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಬುಧವಾರ ಅವರು ಸ್ಥಳೀಯ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನೂತನ ಬಿಜೆಪಿ ತಾಲೂಕಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ತಾಲೂಕಿನ ನೂತನ ಪಕ್ಷದ ಪದಾಧಿಕಾರಿಗಳು ಮುಂಬರುವ  ದಿನಗಳಲ್ಲಿ ನೀವು ಹೊಸ ಚೈತನ್ಯ, ಭರವಸೆ ಮತ್ತು ಉತ್ಸಾಹದಿಂದ ಕೆಲಸ ಮಾಡಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿ, ಪ್ರತಿ ಸಮುದಾಯ ಮತ್ತು ಪ್ರತಿಯೊಬ್ಬರ ವಿಶ್ವಾಸವನ್ನು ಗಳಿಸಲು ನೀವು ಪ್ರತಿ ಗುಂಪನ್ನು ತಲುಪಬೇಕಲ್ಲದೇ ನಾವೆಲ್ಲರೂ ಸೇರಿ ನಮ್ಮ ಅಭ್ಯರ್ಥಿಯನ್ನು ಬಹಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ ನಾವು ರಾಜ್ಯದಲ್ಲಿ 25 ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ದಾಟಬೇಕು. ರಾಜ್ಯದಲ್ಲಿ ಪಕ್ಷವು ತನ್ನ ಹಿಂದಿನ ದಾಖಲೆಗಳನ್ನು ಮುರಿಯಲು ಗುರಿಯನ್ನು ಸಾಧಿಸಲು ನೂತನ ಪದಾಧಿಕಾರಿಗಳ ಪ್ರಯತ್ನ ಬಹಳ ಅವಶ್ಯಕವಾಗಿದೆಯಲ್ಲದೇ ನಮ್ಮ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಈ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಲು ಪ್ರತಿ ಭೂತ ಮಟ್ಟದಲ್ಲಿ ಕಾರ್ಯಕರತರು ಶ್ರಮವಹಿಸಿ ದುಡಿಯಬೇಕಿದೆ ಎಂದರು.ನೂತನ ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಯೋಗಣ್ಣ ಶಿರೂರು ಪಕ್ಷದ ಧ್ವಜ ಸ್ವೀಕರಿಸಿ ಮಾತನಾಡಿದ ಅವರು ತಾಲೂಕಿನ ಪ್ರತಿಯೊಬ್ಬ ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಎಲ್ಲ ಧುರೀಣರು ನನಗೆ ಸಹಕಾರ ನೀಡುವ ಮೂಲಕ ಪಕ್ಷವನ್ನು ಎಲ್ಲಾ ಚುನಾವಣೆಯಲ್ಲಿ ಗೆಲ್ಲಿಸಲು ಅನೂಕೂಲ ಕಲ್ಪಿಸಲು ಸಹಕರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ  ಬಸವರಾಜ ಛತ್ರದ,  ಹಾಲೇಶ  ಜಾಧವ್,  ರಾಜೇಂದ್ರ  ಹಾವೇರಣ್ಣನವರ , ಸಂತೋಷ್  ಆಲದಕಟ್ಟಿ, ಮುರಿಗೆಪ್ಪ  ಶೆಟ್ಟರ,  ವಿದ್ಯಾ ಶೆಟ್ಟಿ, ರುದ್ರೇಶ್ ಚನ್ನಣ್ಣನವರ್, ವೀರೇಂದ್ರ  ಶೆಟ್ಟರ, ನಾಗರಾಜ್ ಹಾವನೂರ,ವಿನಯ್  ಹಿರೇಮಠ   ಬಸವರಾಜ ಬಂಕಾಪುರ, ಸುಭಾಷ್  ಮಾಳಗಿ  ಸೇರಿದಂತೆ ಇತರರಿದ್ದರು.