ಜಾನುವಾರುಗಳು ರೋಗಕ್ಕೀಡಾದರೆ-ಕಾಣೆಯಾದರೆ ತಕ್ಷಣ ಮಾಹಿತಿ ಲಭ್ಯವಾಗುವ ಚಿಪ್ ಅಳವಡಿ
ಯಲ್ಲಾಪುರ 24: ರೈತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಎಲ್ಲ ಜಾನುವಾರುಗಳ ಕಿವಿಗೆ
ಚಿಪ್ ಅಳವಡಿಸಲಾಗುತ್ತಿದ್ದು, ಇದರಿಂದ ಯಾವುದೇ ಜಾನುವಾರುಗಳು ರೋಗಕ್ಕೀಡಾದರೆ ಅಥವಾ ಕಾಣೆಯಾದರೆ ತಕ್ಷಣ
ಮಾಹಿತಿ ಲಭ್ಯವಾಗುತ್ತದೆ. ಅಲ್ಲದೇ, ಅಕಾಲಿಕ ಮರಣವನ್ನಪ್ಪಿದರೆ ಸಕರ್ಾರದ ವಿಮೆ ಪಡೆಯಲು ಅನುಕೂಲವಾಗುತ್ತದೆ.
ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸಚಿವ ವೆಂಕಟರಾವ್ ನಾಡಗೌಡ
ಹೇಳಿದರು.
ಅವರು ಪಟ್ಟಣದ
ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ. 'ಜಿಲ್ಲೆಯಲ್ಲಿ 230 ಫಲಾನುಭವಿಗಳಿಗೆ ವಿಮೆ ಸೌಲಭ್ಯ ದೊರೆತಿಲ್ಲ
ಎನ್ನುವುದು ನನ್ನ ಗಮನಕ್ಕೆ ಬಂದಿದೆ.
ಈ ಕುರಿತಾಗಿಯೂ ತಕ್ಷಣ ಗಮನ ಹರಿಸಲಾಗುವದು ಎಂದರು.
ಜಾನುವಾರುಗಳ ಕಿವಿಗೆ ಚಿಪ್ ಅಳವಡಿಸುವ ಕಾರ್ಯ
ಜಿಲ್ಲೆಯಲ್ಲಿ ಶೇ 60ರಷ್ಟು ಮಾತ್ರ
ಕಾರ್ಯಗತವಾಗಿದೆ.
ಆದ್ದರಿಂದ ಇಂಥ ಉಪಯುಕ್ತ ಯೋಜನೆಯನ್ನು
ಎಲ್ಲ ಪ್ರದೇಶಗಳ ಹೈನುಗಾರರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತ ಗಮನ ಹರಿಸಬೇಕು ಎಂದರು.ರಾಜ್ಯದಲ್ಲಿ 600 ಪಶುವೈದ್ಯರ ಹುದ್ದೆ ಖಾಲಿ ಇದ್ದು, ಇನ್ನು
2 ತಿಂಗಳ ಒಳಗೆ ಈ ಕುರಿತು
ನೂತನ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಕೇವಲ 31 ಪಶುವೈದ್ಯರು ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ ಖಾಲಿ ಇರುವ 114 ಹುದ್ದೆಗಳನ್ನೂ
ಶೀಘ್ರವಾಗಿ ಭತರ್ಿ ಮಾಡಲಾಗುವುದು ಎಂದು ಅವರು ಭರವಸೆ
ನೀಡಿದರು.ಇದೇ ಸಂದರ್ಭದಲ್ಲಿ ಸಚಿವ
ವೆಂಕಟರಾವ್ ನಾಡಗೌಡರನ್ನು ಶಾಸಕ
ಶಿವರಾಮ ಹೆಬ್ಬಾರ ಗೌರವಿಸಿದರು.
ಕೆಪಿಸಿಸಿ ಸದಸ್ಯ ವಿಜಯ ಮಿರಾಶಿ, ತಾ. ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ, ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪನಿದರ್ೇಶಕ ಡಾ.ಸುಬ್ರಾಯ ಭಟ್ಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್.ಗಾಂವ್ಕರ, ನಾಗರಾಜ ನಾಯ್ಕ, ಅಮಿತ ಅಂಗಡಿ, ಶ್ರೀಧರ ಶೆಟ್ಟಿ, ಕಿರಣ ಗಾಂವ್ಕರ ಇದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 