ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಶಿವಾನಂದ ಹುನ್ನೂರ
I will work for the development of society: Shivananda Hunnur
ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ: ಶಿವಾನಂದ ಹುನ್ನೂರ
ಮಹಾಲಿಂಗಪುರ 25: ಹಡಪದ ಅಪ್ಪಣ್ಣ ಸಮಾಜದ ಏಳಿಗೆ ಮತ್ತು ಸಂಘಟನೆ ಗಟ್ಟಿಗೊಳಿಸುವುದು ಅಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ಜೊತೆಗೆ ರಾಜ್ಯದ ತುಂಬಾ ಪ್ರವಾಸ ಮಾಡಿ ಸಮಾಜದ ಕುಂದು-ಕೊರತೆ ಕಂಡು ಹಿಡಿದು ಸಮಾಜದ ಸಲುವಾಗಿ ಹಗಲಿರುಳು ದುಡಿಯುವೆ ಎಂದು ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಹುನ್ನೂರ ಹೇಳಿದರು.
ರಬಕವಿ ನಗರದ ಪ್ರವಾಸಿ ರಂಗಮಂದಿರದಲ್ಲಿ ನೂತನ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಂತರ ಭಾರತೀಯ ಏರ್ ಫೋರ್ಸ್ ಗ್ರೇಡ್-1 ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ ನಾವಿ ಅವರನ್ನು ಸನ್ಮಾನಿಸಲಾಯಿತು.
ಹಡಪದ ಅಪ್ಪಣ್ಣ ಸಮಾಜ ಮುಖಂಡರಾದ ಬುದ್ಧಪ್ಪ ಕುಂದಗೋಳ, ಚಂದ್ರಶೇಖರ ಮಾಚಕನೂರ, ವಿನೋದ ಜಾಧವ, ಮಲ್ಲಪ್ಪ ನಾವಿ, ಅಶೋಕ ಹುನ್ನೂರು, ಶಂಕರ ಹಿಪ್ಪರಗಿ, ಶಿವಾನಂದ ನಾವಿ, ಮಹಾಂತೇಶ ಹಡಪದ, ಲಕ್ಕಪ್ಪ ನಾವಿ, ವಿಠ್ಠಲ ನಾವಿ, ಹಣಮಂತ ಉಮರಾಣಿ, ಮುತ್ತಪ್ಪ ಹಿಪ್ಪರಗಿ, ಬಸವರಾಜ ಹಾಲಹಳ್ಳಿ, ಜ್ಯೋತಿಬಾ ಜಾಧವ ಸೇರಿದಂತೆ ಅನೇಕರಿದ್ದರು. ಪತ್ರಕರ್ತ ಹಣಮಂತ ನಾವಿ ನಿರೂಪಿಸಿ, ವಂದಿಸಿದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 