ಪಟ್ಟಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ
Home Minister Dr. G. Parameshwara visits the town
ಯರಗಟ್ಟಿ 26: ಪಟ್ಟಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿದರು.ಈ ವೇಳೆ ತಾಲೂಕಿನ ಸಮಸ್ತ ನಾಗರಿಕರು ದಲಿತ ಮುಖಂಡರು, ರೈತರು ಅದ್ದೂರಿಯಾಗಿ ಸ್ವಾಗತಿಸಿದರು.ಕರ್ನಾಟಕ ರಕ್ಷಣಾ ವೇದಿಕೆ, ದಲಿತಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪತ್ರಿಕಾ ಮಾಧ್ಯಮದವರು, ನ್ಯಾಯವಾದಿಗಳ ಸಂಘ ಮಾಜಿ ಸೈನಿಕರ ಸಮನ್ವಯ ಸಮಿತಿ ಕೂಲಿ ಕಾರ್ಮಿಕರ ಸಂಘಟನೆಗಳ ನೇತೃತ್ವದಲ್ಲಿ ಪೊಲೀಸ್ ಠಾಣೆಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.ಈ ವೇಳೆ ಕರವೇ ಅಧ್ಯಕ್ಷ ರಫೀಕ ಡಿ.ಕೆ. ದಲಿತ ಮುಖಂಡ ಸಂತೋಷ ಚನ್ನಮೇತ್ರಿ, ಸುರೇಶ್ ಭಜಂತ್ರಿ, ವಿಠ್ಠಲಗೌಡ ದೇವರಡ್ಡಿ, ಅರುಣ ನೀಲಪ್ಪನ್ನವರ, ಫಾರುಕ್ ಅತ್ತಾರ, ಅಬಿದಬೇಗ ಜಮಾದಾರ, ಪೀರೋಜ ಖಾದ್ರಿ, ಮಂಜುನಾಥ ಬಾವಿಹಾಳ, ಸೋಮು ರೈನಾಪೂರ, ಮಂಜುನಾಥ ಸಿದ್ದನಗೌಡ, ಹಸೇನಸಾಬ ಹುಸೇನಾಯ್ಕರ, ಸೂರಜ ಸಂಗೋಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.26 ಯರಗಟ್ಟಿ 01ಪೋಟೋ ಶೇಷಿಕೆಹೇಳಿಕೆ: ಯರಗಟ್ಟಿ ತಾಲೂಕಿಗೆ ಈಗಾಗಲೇ ಪೊಲೀಸ್ ಠಾಣೆಯನ್ನು ಮಂಜುರಾತಿ ಮಾಡಲಾಗಿದೆ ಆದರೆ ಫೈನಾನ್ಸಿಯಲ್ ಹಂತದಲ್ಲಿದ್ದು ಡಿಸೆಂಬರ್ ತಿಂಗಳಲ್ಲಿ ನೂತನ ಪೊಲೀಸ್ ಠಾಣೆ ಪ್ರಾರಂಭ ಮಾಡುವುದಾಗಿ ಶಾಸಕ ವಿಶ್ವಾಸ ವೈದ್ಯ ಅವರ ಜೋತೆ ಮಾತನಾಡಿದ್ದೆನೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 