ಯುವಕರಿಂದ ಗುಡ್ಡಾಪೂರಕ್ಕೆ ಪಾದಯಾತ್ರೆ
ಹುಕ್ಕೇರಿ : ಸ್ಥಳೀಯ ಸುಕ್ಷೇತ್ರ ಗುಡ್ಡಾಪೂರ ದಾನಮ್ಮಾದೇವಿ ಪಾದಯಾತ್ರೆ ಕಮೀಟಿ ಚಾವಡಿ ಹಳ್ಳದಕೇರಿ ಇವರಿಂದ ಶವಯ್ಯ ಶಿವಮೊಗ್ಗಿಮಠ ಇವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗುರುವಾರದಂದು 60 ಕ್ಕೂ ಮಿಕ್ಕಿ ಯುವಕರು ಬೆಳಗಿನ ಜಾವ ಹುಕ್ಕೇರಿಯಿಂದ ಪಾದಯಾತ್ರೆ ಮುಖಾಂತರ ಗುಡ್ಡಾಪೂರದ ದಾನಮ್ಮಾ ದೇವಸ್ಥಾನಕ್ಕೆ ತೆರಳಿದರು ಪ್ರಥಮದಲ್ಲಿ ದಾನಮ್ಮಾ ದೇವಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಸಿ ನಾಗರಿಕರು ಪಾದಯಾತ್ರಿಗಳನ್ನು ಬೀಳ್ಕೊಡಲಾಯಿತು.
ಗುರುವಾರ ದಿನಾಂಕ 5 ರಂದು ಸಂಸುದ್ದಿ ಶುಕ್ರವಾರ ದಿನಾಂಕ 6 ರಂದು ಹಲ್ಯಾಳ ಶನಿವಾರ ದಿನಾಂಕ 7 ರಂದು ಕೊಹಳ್ಳಿ ರವಿವಾರ ದಿನಾಂಕ 8 ರಂದು ಮುಚ್ಚಂಡಿ (ಧರೆಖಾನ ದೇವಸ್ಥಾನ) ಯಲ್ಲಿ ಭೋಜನ ಹಾಗೂ ರಾತ್ರಿ ವಾಸ್ತವ್ಯ ಮಾಡಿ ಸೋಮವಾರ ದಿನಾಂಕ 9 ರಂದು ಗುಡ್ಡಾಪೂರ ದಾನಮ್ಮಾ ದೇವಸ್ಥಾನ ತಲುಪಲಿದ್ದಾರೆ. ಅದೇ ದಿನ ಸಂಜೆ 7 ಘಂಟೆಗೆ ಕಾತರ್ಿಕೋತ್ಸವ
ಪಾದಯಾತ್ರೆಯ ಸಂಯೋಜಕರಾದ ಶಿವಯ್ಯ ಶಿವಮೊಗ್ಗಿಮಠ, ರಾಜು ಮುಚ್ಚಂಡಿ, ರಾಜು ಕುಪಾಟಿ, ಸಚೀನ ಕುಂಬಾರ, ಶಶಿಕಾಂತ ಮದಕನ್ನವರ, ಮಂಜು ಮುಚ್ಚಂಡಿ, ಶಂಕರ ಮುದನ್ನವರ, ಕಿರಣ ಶಿವಮೊಗ್ಗಿಮಠ, ಸಂದೀಪ ಕುಮಾರ, ಇನ್ನಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ 