ಹೆಡಿಯಾಲ: ವರುಣನ ಕೃಪೆಗಾಗಿ ಕತ್ತೆ ಮೆರವಣಿಗೆ
ರಾಣೇಬೆನ್ನೂರು-ಮೇ.25: ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಮಳೆಯ ಆಗಮನಕ್ಕಾಗಿ ಕತ್ತೆ ಮೆರವಣಿಗೆ ಮಾಡಲಾಯಿತು. ಮುಂಗಾರು ಪೂರ್ವ ಮಳೆ ಆಗದೆ ರೈತರು ಆತಂಕಗೊಂಡಿದ್ದರು. ಕತ್ತೆ ಮೆರವಣಿಗೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಯುವಕರು ಕತ್ತೆಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಆರಂಭಕ್ಕೆ ಕತ್ತೆಗೆ ಬೇವಿನ ಎಲೆಯಿಂದ ಶೃಂಗರಿಸಿ ಹೂ ಮಾಲೆ ಹಾಕಲಾಯಿತು. ಆನಂತರ ಹಲಗೆ ಬಾರಿಸುತ್ತಾ ಕತ್ತೆಯನ್ನು ಗ್ರಾಮದಲ್ಲಿ ಸಂಚರಿಸಲಾಯಿತು. ಮಳೆ ಇಲ್ಲದೇ ಜನ-ಜಾನುವಾರುಗಳ ಪರಿಸ್ಥಿತಿ ಗಂಭೀರವಾಗಿದೆ. ವರುಣ ದೇವ ಬೇಗ ಕೃಪೆ ತೋರಿ ಮಳೆ ನೀಡಬೇಕು ಎಂದು ಗ್ರಾಮಸ್ಥರು ಆ ಭಗವಂತನಲ್ಲಿ ಸಾಮೂಹಿಕವಾಗಿ ಪ್ರಾಥರ್ಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 