ಹಜರತ್ ಸೈಯದ್ ಮೀರ ಅಲಂ ನವಾಜ್ ಖಾದ್ರಿ ಅಹಿಂಸೆಯನ್ನು ಜಗತ್ತಿಗೆ ಸಾರಿದ್ದಾರೆ- ಮೊಹಮ್ಮದ್ ಇಮಾಮ್ ನಿಯಾಜ್

ಹೊಸಪೇಟೆ 20: ದಿನಾಂಕ 19-04-2025 ವಿಜಯನಗರ ಕ್ಷೇತ್ರ ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿರುವ ಹಜರತ್ ಸೈಯದ್ ಮೀರ್ ಆಲಮ್ ನವಾಜ್ ಖಾದ್ರಿ ಅಜ್ಜನವರ 92 ನೇ ಉರಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸರ್ವ ಜನಾಂಗದ ಸಹಸ್ರಾರು ಜನರು ಆಗಮಿಸಿ ಆಶೀರ್ವಾದ ಪಡೆದರು. 

ಈ ಸಂದರ್ಭದಲ್ಲಿ ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಹೆಚ್‌. ಎನ್ ಮೊಹಮ್ಮದ್ ಇಮಾಮ್ ನಿಯಾಜ್‌ರವರು ಮಾತನಾಡಿ ಇಸ್ಲಾಂ ಧರ್ಮದ ಧರ್ಮ ಗುರುಗಳಾದ ಪ್ರವಾದಿ  ಮೊಹಮ್ಮದ್ ಪೈಗಂಬರ್‌ರವರ ಆದೇಶದ ಪ್ರಕಾರ ಸೂಫಿ ಸಂತರಾದ ಹಜರತ್ ಸೈಯದ್ ಮೀರ ಅಲಂ ನವಾಜ್ ಖಾದ್ರಿ ಅಜ್ಜನವರು ನ್ಯಾಯ, ನೀತಿ, ಸರ್ವಜನಾಂಗದಲ್ಲಿ ಪ್ರೀತಿ, ಪ್ರೇಮ ವಾತ್ಸಲ್ಯ, ಸೌಹಾರ್ದತೆ ಅಹಿಂಸೆಯನ್ನು ಜಗತ್ತಿಗೆ ಸಾರಿರುತ್ತಾರೆ,  

ಇಂತಹ ಸೂಫಿ ಸಂತರಾದ ಹಜರತ್ ಸೈಯದ್ ಮೀರ ಅಲಂ ನವಾಜ್ ಖಾದ್ರಿ ಅಜ್ಜನವರ ಉರುಸ್ ನೂರಾರು ವರ್ಷಗಳಿಂದ ನಡೆಯುತ್ತಿದ್ದು  ಈ ಸಂದರ್ಭದಲ್ಲಿ ದರ್ಗಾದ ಒಳಗಡೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಗವಂತನ ಕೃಪ ಆಶೀರ್ವಾದದಿಂದ ಉತ್ತಮ ಮಳೆಯ ಬೆಳೆಯಾಗಿ ಎಲ್ಲರೂ ಸುಖ, ಶಾಂತಿ, ಸಂಪತ್ತು, ನೆಮ್ಮದಿ ಸೌಹಾರ್ದತೆ, ಪ್ರೀತಿ, ಪ್ರೇಮ ವಾತ್ಸಲ್ಯದಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು. ದರ್ಗಾಗೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ  ಎಂದರು 

ಈ ಒಂದು ಉರುಸ್ ಸಮಾರಂಭದಲ್ಲಿ ಹಜರತ್ ಸೈಯದ್ ಮೀರ ಅಲಂ ನವಾಜ್ ಖಾದ್ರಿ ದರ್ಗಾದ ಪದಾಧಿಕಾರಿಗಳಾದ ಅನ್ಸರ್‌ರವರು, ಇರ್ಫಾನ್‌ರವರು, ಸಮೀರ್, ಶಬ್ಬೀರ್, ಫಾರೂಕ್, ಹಾಗು ಅಂಜುಮನ್ ಕಮಿಟಿಯ ಉಪಾಧ್ಯಕ್ಷರಾದ ಎಮ್ ಫಿರೋಜ್ ಖಾನ್ ಕಾರ್ಯದರ್ಶಿಗಳಾದ ಎಮ್‌.ಡಿ. ಬೂಬಕ್ಕರ್ ಖಾಜಾಂಚಿಗಳಾದ ಜಿ. ಅನ್ಸರ್ ಭಾಷ ಸಹಕಾರ್ಯದರ್ಶಿಗಳಾದ ಡಾ.ಎಮ್‌.ಡಿ.ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರುಗಳಾದ  ಕೋತ್ವಾಲ್ ಮೊಹಮ್ಮದ್ ಮೋಸಿನ್ ಅಡ್ವಕೇಟ್ ಸದ್ದಾಮ್ ಮತ್ತು ಎಲ್ ಗುಲಾಮ್ ರಸೂಲ್ ಸಮುದಾಯದ ಮುಖಂಡರು ಸರ್ವ ಧರ್ಮದ ಹಿರಿಯ ಮುಖಂಡರುಗಳು, ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.