ಹರಪನಹಳ್ಳಿ: ತೀರ ಹದಗೆಟ್ಟ ರಸ್ತೆ ಗ್ರಾರಮಸ್ಥರಿಗೆ ತೊಂದರೆ
ಲೋಕದರ್ಶನ ವರದಿ
ಹರಪನಹಳ್ಳಿ 09: ಪಟ್ಟಣದ ಜೋಯಿಸರಕೇರಿ ಶಂಕರಮಠದ ಬಳಿಯಿರುವ ನಾಗರಕಟ್ಟೆಗೆ ಹೋಗುವ ರಸ್ತೆ ತೀರ ಹದಗೆಟ್ಟಿದೆ.
ಅಂದಾಜು 100 ಮೀಟರ್ ಇರುವ ರಸ್ತೆಯ ಬಳಿ ನಾಗರದೇವರ ಕಟ್ಟೆ ಇದೆ, ಅಲ್ಲಿನ ನಿವಾಸಿಗಳಿಗೆ ಓಡಾಡಲು ತೀವ್ರ ತೊಂದರೆ ಆಗುತ್ತಿದೆ. ಚರಂಡಿ ನೀರು ಹರಿಯುತ್ತಿರುವ ಜಾಗದಲ್ಲೇ ಮಕ್ಕಳು ಆಟವಾಡುತ್ತಾರೆ, ವೃದ್ಧರೂ ಇದೇ ರಸ್ತೆ ಮೂಲಕ ಹೆಚ್ಚು ಓಡಾಡುತ್ತಾರೆ.
ಇಲ್ಲಿ ಸಿಮೆಂಟ್ ರಸ್ತೆ ಮಾಡುವಂತೆ ಹಲವು ಬಾರಿ ಅಧಿಕಾರಿಗಳನ್ನು ಮನವಿ ಮಾಡಿದ್ದೇವೆ, ಯಾರೊಬ್ಬರು ಇತ್ತ ಕಡೆಗೆ ಗಮನ ಹರಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಮುಂಜೂರಾಗಿದೆ ಎನ್ನುತ್ತಿದ್ದಾರೆ, ಆದರೆ ರಸ್ತೆ ನಿಮರ್ಾಣಕ್ಕೆ ಕೆಲವರೂ ಅಡ್ಡಿಪಡಿಸುತ್ತಿದ್ದಾರೆ. ತಕ್ಷಣ ಅಧಿಕಾರಿಗಳು ಜೋಯಿಸರಕೇರಿಯ ಮಠದ 5 ಮತ್ತು 4ನೇ ವಾರ್ಡ್ಗಳ ನಡುವಿರುವ ನಾಗದೇವರ ಕಟ್ಟೆಗೆ ಹೋಗುವ ರಸ್ತೆ ಅಭಿವೃದ್ದಿ ಪಡಿಸಬೇಕು ಎಂದು ಅಲ್ಲಿನ ನಿವಾಸಿಗಳಾದ ಭರತ್, ಪಕ್ಕೀರಪ್ಪ, ರಾಜಾಸಾಬ್, ನನ್ಯಸಾಬ್,ಸೋಮವ್ವ, ಚಂದ್ರಶೇಖರ್ ಒತ್ತಾಯಿಸಿದ್ದಾರೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 