ನೀರಾವರಿ ಸೌಲಭ್ಯ ಒದಗಿಸುವಂತೆ ಹಸಿರು ಸೇನೆ ಪ್ರತಿಭಟನೆ

ಮುಂಡಗೋಡ 28:  ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸುವಂತೆ ಹಾಗು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು ತಹಸೀಲ್ದಾರ್ ಶಂಕರ ಗೌಡಿ ಮನವಿ ಸ್ವೀಕರಿಸಿ ಈ ಬಗ್ಗೆ ಚಿಕ್ಕ ನೀರಾವರಿ ಅಧಿಕಾರಿಗಳೊಂದಿಗೆ ಮಾತನಾಡಿ ನೀರು ಒದಗಿಸುವ ಬಗ್ಗೆ ಭರವಸೆ ನೀಡಿದರು ರಾಜ್ಯಾದ್ಯಕ್ಷ ಚನ್ನಪ್ಪ ಪೂಜಾರಿ, ತಾಲೂಕಾ ಅಧ್ಯಕ್ಷ ಪೀರಜ್ಜ ಸಾಗರ, ಮುಖಂಡರಾದ ಪ್ರಕಾಶ ನಾಯ್ಕ, ಶಿಶನ ನಂದಿ, ಮುತ್ತಣ್ಣ ಗುಡಗೇರಿ, ಜಂಗ್ಲಿಷಾ ಇಮಾಮಸಾಬನವರ, ಭರಮಣ್ಣಾ ದೊಡ್ಡನಿ. ಸಂತೋಷ ಸಣ್ಣಮನಿ, ಶೇಕಪ್ಪ ಹೊತಗಣ್ಣನವರ ಸೇರಿದಂತೆ ಇತರರಿದ್ದರು.