ಬಬಲಾದಿ ಗ್ರಾಮದಲ್ಲಿ ಆಲೆಕಲ್ಲು ಮಳೆಗೆ ದ್ರಾಕ್ಷಿ ನಾಶ

ಬಬಲಾದಿ ಗ್ರಾಮದಲ್ಲಿ ಆಲೆಕಲ್ಲು ಮಳೆಗೆ ದ್ರಾಕ್ಷಿ ನಾಶ Grapes destroyed by hailstorm in Babaladi village

ಲೋಕದರ್ಶನ ವರದಿ  

ಇಂಡಿ 23 : ತಾಲೂಕಿನ ಬಬಲಾದ ಗ್ರಾಮದ ರೇವಪ್ಪ.ಶರಣಪ್ಪ ಬಿರಾದಾರ ಸರ್ವೇ ನಂಬರ್ 393 ಎಂಬ ರೈತರಿಗೆ ಸೇರಿದ ಸುಮಾರು 4ಏಕರೆ ದ್ರಾಕ್ಷಿ ಬೆಳೆ ದಿನಾಂಕ 20.4.26ರಂದು ಸುರಿದ ಗಾಳಿ ಹಾಗೂ ಆಲೆಕಲ್ಲು ಮಳೆಗೆ ಅಪಾರ ಪ್ರಮಾಣದ  ಅಂದಾಜು 50ಲಕ್ಷದ ದ್ರಾಕ್ಷಿ ನಾಶವಾಗಿದೆ. ಸ್ಥಳಕ್ಕೆ ಜೆಡಿಎಸ್ ಮುಖಂಡರಾದ ಬಿಡಿ ಪಾಟೀಲರು ಭೇಟಿ ನೀಡಿ ರೈತ ಕುಟುಂಬದ ಸದಸ್ಯರಿಗೆ ದೈರ್ಯ ಹೇಳಿ. ಸಂಬದಿಸಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ತಾಲೂಕಾ ದಂಡಾಧಿಕಾರಿಗಳು  ಸ್ಥಳಕ್ಕೆ ಭೇಟಿ ನೀಡಿ ಸರ್ಕಾರ ದಿಂದ ಬಡರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.