ಬಳ್ಳಾರಿ: ಪಾಪದ ದುಡ್ಡಲ್ಲಿ ಸರಕಾರ ಬೀಳಿಸಿದರು ರಾಮುಲು ವಿರುದ್ಧ ಎಚ್ಡಿಕೆ ಕೆಂಡ!
ಬಳ್ಳಾರಿ 26: ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಮುಲು ವಿರುದ್ಧ ಕಿಡಿಕಾರುವ ಮುನ್ನ, ಒಂದು ಉದಾಹರಣೆಯನ್ನೂ ಕೊಟ್ಟರು. ಎಸ್ಟಿ ಸಮುದಾಯದ ಹೆಣ್ಣು ಮಗಳು ಸಿಎಂ ಯಡಿಯೂರಪ್ಪ ಬಳಿ, ಸಚಿವರ ಬಳಿ ತಮ್ಮ ಗೋಳು ಹೇಳಿಕೊಂಡಾಗ ಯಾರೂ ಕೇಳಲಿಲ್ಲವಂತೆ. ಆಕೆ ಕೊನೆಗೆ ತ ನ್ನ ಕಿಡ್ನಿ ಮಾರಾಟ ಮಾಡಿ ಜೀವನ ಮಾಡ್ತೇನೆ ಎಂದಳು. ಆಗ ನಾನು ಆಕೆಗೆ 1 ಲಕ್ಷ ರೂಪಾಯಿ ಕೊಟ್ಟೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮುಲು ಕೂಡಾ ಎಸ್ಟಿ ಸಮುದಾಯದವರು. ಗದಗ್ ಜಿಲ್ಲೆಯ ಲಕ್ಕವ್ವ ಕೂಡಾ ಎಸ್ಟಿ ಸಮುದಾಯದವರು. ಆಕೆಯ 9 ಹಸುಗಳು ಮೃತಪಟ್ಟಿದ್ದವು. ಜೀವನವೇ ದುಸ್ತರವಾಗಿತ್ತು. ತಮ್ಮ ಸಮುದಾಯಕ್ಕೆ ಸೇರಿದ್ದ ಮಹಿಳೆಗೇ ರಾಮುಲು ಯಾವುದೇ ಸಹಾಯ ನೀಡಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಜಾರಕಿಹೊಳಿ ಕುಟುಂಬವನ್ನು ಪರೋಕ್ಷವಾಗಿ ಹೆಸರಿಸಿದ ಕುಮಾರಸ್ವಾಮಿ, ಗೋಕಾಕ್ನವರಿಗೆ ಸಾಹುಕಾರರು ಎಂದು ಟಿವಿಗಳಲ್ಲಿ ಕರೆಯುತ್ತಾರೆ. ಆದ್ರೆ, ಆ ಭಾಗದ ರೈತರಿಗೆ ಸಾಹುಕಾರರು ಹಣ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 