ಸರ್ಕಾರಿ ಯೋಜನೆಗಳು ಬಡವರಿಗೆ ತಲುಪಲಿ: ಶಾಸಕ ಸವದಿ
Government schemes should reach the poor: MLA Savadi
ಲೋಕದರ್ಶನ ವರದಿ
ಮಹಾಲಿಂಗಪುರ 23 : ಸರ್ಕಾರದ ಪ್ರತಿ ಯೋಜನೆಯೂ ನಿಜವಾದ ಬಡವರಿಗೆ ತಲುಪಬೇಕು ಆಮೂಲಕ ಬಡವರಿಗೆ ಉದ್ಧಾರವಾಗಿ ಸ್ವಸ್ಥ ಸಮಾಜ, ಸಮೃದ್ಧ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ. ಆ ನಿಟ್ಟಿನಲ್ಲಿ ಶಿವಲಿಂಗ ಪೋಳ ಮತ್ತು ಮಹಾಲಿಂಗ ಮುಗಳಖೋಡ ಇವರ ತಂಡ ಬಡ ನಿರ್ಗತಿಕರನ್ನು ಗುರುತಿಸಿ ಅವರಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುತ್ತಿರುವದು ಶ್ಲಾಘನೀಯ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಸಮೀಪದ ಸೈದಾಪುರ ಕ್ರಾಸ್ ನ ಮಾರುತಿ ದೇವಾಲಯದ ಆವರಣದಲ್ಲಿ ಜರುಗಿದ ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವೀಕಲ ವೇತನ ಮತ್ತು ವೃದ್ಧಾಪ್ಯ ವೇತನಗಳ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಕಂಪು, ಮುಖಂಡರಾದ ಬಸವಣ್ಣೆಪ್ಪ ಬ್ಯಾಳಿ, ಮುರಿಗೆಪ್ಪ ಗುಣದಾಳ, ಶಿವಪ್ಪ ಬಾಯಪ್ಪಗೋಳ, ಚನ್ನಪ್ಪ ಪಟ್ಟಣಶೆಟ್ಟಿ, ನಾಗಪ್ಪ ಕೇತಗೌಡ, ಶಿವಲಿಂಗಪ್ಪ ಕೌಜಲಗಿ, ಪರಮಾನಂದ ಉಳ್ಳಾಗಡ್ಡಿ, ರಾಮನಗೌಡ ಪಾಟೀಲ, ಚಿನ್ನಪ್ಪ ಬಾಯಪ್ಪಗೋಳ, ಸಿದ್ಧಾರೂಢ ಕೌಜಲಗಿ, ಮುತ್ತಪ್ಪ ಪಶ್ಚಾಪುರ, ಲಕ್ಷ್ಮಣ ಉಳ್ಳಾಗಡ್ಡಿ, ಮಹಾಲಿಂಗಪ್ಪ ಬಾಯಪ್ಪಗೋಳ, ಮಲ್ಲಪ್ಪ ಬಾಯಪ್ಪಗೋಳ, ಶಿವಲಿಂಗ ಪೋಳ, ಮಹಾಲಿಂಗ ಮುಗಳಖೋಡ, ಮಲ್ಲಪ್ಪ ಕೌಜಲಗಿ, ಯಮನಪ್ಪ ಉಪ್ಪಾರ, ಆನಂದ ಬನಹಟ್ಟಿ, ವಿವೇಕ ಮಲಕಾಪುರ, ಲಚ್ಚಪ್ಪ ಲಮಾಣಿ, ಮಹಾದೇವ ಬಿಸನಾಳ ಮಲ್ಲಪ್ಪ ಬಿಸನಾಳ ಇತರರಿದ್ದರು
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 