ಅಂಗಡಿಯಲ್ಲಿ ಬಾಲಕಿ ಕೆಲಸ: ಮಾಲೀಕರಿಗೆ ಕರಪತ್ರ

ಕಂಪ್ಲಿ 08 ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕರ ಪತ್ತೆಗೆ ತಹಸೀಲ್ದಾರರ ನೇತೃತ್ವದ ಅಧಿಕಾರಿಗಳ ತಂಡವು ಪಟ್ಟಣದಲ್ಲಿನ ನಲವತ್ತಕ್ಕು ಅಧಿಕ ಕಿರಾಣಿ ಬಟ್ಟೆ ಅಂಗಡಿ, ಗ್ಯಾರೇಜು, ಹೋಟೆಲ್‌ಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರೀಶೀಲಿಸಿತು. 

ಕಾರ್ಮಿಕ ನೀರೀಕ್ಷಕ ಎಂ.ಆಶೋಕ ಮಾತನಾಡಿ, ಬಾಲ ಮಕ್ಕಳನ್ನು ಅಂಗಡಿಯಲ್ಲಿ ಕೆಲಸಕ್ಕೆ ಇಟ್ಟು ಕೊಳ್ಳುವುದು ಅಪರಾಧವಾಗಿದೆ. ಬಟ್ಟೆ ಅಂಗಡಿ, ಸೇರಿ ಕೆಲಸ ಮಾಡುತ್ತಿರುವ ಮೂವರು ಮಕ್ಕಳನ್ನು ಪತ್ತೆ ಮಾಡಿದೆ. ಈ ಮಕ್ಕಳ ವಯಸ್ಸು, ಶಾಲೆ ಬಿಟ್ಟ ಬಗ್ಗೆ ದಾಖಲೆಯೊಂದಿಗೆ ವರದಿ ನೀಡುವಂತೆ ಶಿಕ್ಷಣ ಸಂಯೋಜಕರಿಗೆ ಸೂಚಿಸಿದೆ. 

ವರದಿ ಪಡೆದುಕೊಂಡು ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು. ಅದೇ ಸಮಯದಲ್ಲಿ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆಯಡಿ ಪ್ರತಿಯೊಮದು ಅಂಗಡಿಗಳ ನೋಂದಣಿ ಮತ್ತು ನೋಂದಣಿ ನವೀಕರಣ ಮಾಡಿಸದ ಅಂಗಡಿಗಳ ಮಾಲೀಕರಿಗೆ, ಕಾರ್ಮಿಕ ಕಾಯ್ದೆ ಉಲ್ಲಂಘಿಸಿದ ಆರು ಅಂಗಡಿಗಳ ಮಾಲೀಕರಿಗೆ ನೋಟೀಸ್ ನೀಡಿದೆ ಎಂದರು.  

 ದಾಳಿ ತಂಡದಲ್ಲಿ ತಹಸೀಲ್ದಾರ್ ಶಿವರಾಜ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಬಳ್ಳಾರಿಯ ಬಾಲ ಕಾರ್ಮಿಕ ಯೋಜನಾ ಸೋಸೈಟಿಯ ಯೋಜನಾ ನಿರ್ದೇಶಕ ಎ.ಮೌನೇಶ್, ತಾಪಂ ಐಇಪಿ ಸಂಯೋಜಕ ಹನುಮೇಶ್ ಹಾಗಲೂರು ಹೊಸಳ್ಳಿ, ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಮ್, ಇಸಿಒಗಳಾದ ಟಿ.ಎಂ.ಬಸವರಾಜ, ಜಿ.ವೀರೇಶ್, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಪಿ.ಬಸವರಾಜ, ಪೊಲೀಸ್ ಎಚ್‌ಸಿ ದತ್ತಾತ್ರೇಯ ಲೋಹರ್, ಚೈಲ್ಡ್‌ಲೈನ್ ಸಂಯೋಜಕಿ ನೇತ್ರಾ, ಕಿರಿಯ ಆರೋಗ್ಯ ನೀರೀಕ್ಷಕಿ ಜೀವನ್‌ಸ್ವಾತಿ ಸೇರಿ ಇತರರಿದ್ದರು.