ಗಂಧದ ಗುಡಿ ಚಲನಚಿತ್ರ ಉಚಿತ ಪ್ರದರ್ಶನ ಸರ್ಕಾರಕ್ಕೆ ಕ್ರಮ ಜರುಗಿಸಬೇಕು: ಮುತ್ತುರಾಜ ಭಾವಿಮನಿ ಒತ್ತಾಯ

ಲೋಕದರ್ಶನ ವರದಿ 

ಶಿರಹಟ್ಟಿ:  ಕನ್ನಡ ನಾಡಿನ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳ ಚಿತ್ತಾರ ಆಧಾರಿತ  ಪವರಸ್ಟಾರ ಪುನಿತ ರಾಜಕುಮಾರ  ನಟನೆಯ ಚಲನಚಿತ್ರವನ್ನು  ಕನ್ನಡಿಗರಿಗಾಗಿ ಗಂಧದ ಗುಡಿ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸುವ ಮೂಲಕ ಯುವ ಪೀಳಿಗಿಗೆ ಅವಕಾಶ ಕಲ್ಪಿಸಬೇಕೆಂದು ಸಮಾಜಿಕ ಹೋರಾಟಗಾರ, ಅಪ್ಪು ಅಭಿಮಾನಿ ಮುತ್ತುರಾಜ ಭಾವಿಮನಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.  

ಅವರು ಡಾ.ಪುನಿತರಾಜಕುಮಾರ ಒಂದು ವರ್ಷದ ಪುಣ್ಯಾರಾಧನೆಯ ಕಾರ್ಯಕ್ರಮದ ನಂತರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.  

ಕನ್ನಡ ನಾಡಿನಲ್ಲಿ ಅಪ್ರತಿಮ ಕಲೆಯನ್ನು ಹೊಂದಿ ಕನ್ನಡಿಗರ ಮನದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿರು ಕರ್ನಾಟಕ ರತ್ನ ಡಾ. ಪುನಿತ ರಾಜಕುಮಾರ ಅಭಿನಯದ ಗಂಧದಗುಡಿ ಚಲನಚಿತ್ರದಲ್ಲಿರುವ ಕನ್ನಡ ನಾಡಿನ ಅಭಿಮಾನದ ಸಂಕೇತವಾಗಿರುವ ಅರಣ್ಯ ಸಂಪತ್ತ  ಮತ್ತು ವನ್ಯಜೀವಿಗಳ ವಿಹಂಗಮ ನೋಟದ ಸಂಭ್ರವನ್ನು ಸವಿಯಲು ಕನ್ನಡಿಗರಿಗೆ ಉಚಿತ ಚಲನಚಿತ್ರ ನೋಡಲು ಅವಕಾಶವನ್ನು ಒದಗಿಸಬೇಕು. ಈ ಹಿಂದೆ ಕಾಶ್ಮೀರ ಪೈಲ್ಸ ಚಲನಚಿತ್ರ ನಾಡಿನಲ್ಲಿ ಉಚಿತವಾಗಿ ಪ್ರದರ್ಶಿಸಿದ ಹಾಗೆ ನಮ್ಮ ಹೆಮ್ಮೆಯ ಗಂಧದಗುಡಿ ಚಲಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಅನುಕೂಲ ಕಲ್ಪಿಸಬೇಕೆಂದು  ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.