ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ

Free training camp for competitive exams

ಮುದ್ದೇಬಿಹಾಳ 18: ನಮ್ಮ ಭಾಗದ ಪ್ರತಿಭಾನ್ವೀತ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ  ಇದೇ ದಿ, 19 ಮತ್ತು 20 ರಂದು ಬೆಳಿಗ್ಗೆ 11 ಗಂಟೆಗೆಯಿಂದ ಎರಡು ದಿನಗಳವರೆಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರ ನಡೆಸುವ ಮೂಲಕ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಯಾಗಬೇಕು ಎಂಬ ಯುವಕಹಿಯುವತಿಯರ ಕನಸು ನನಸಾಗಿಸುವಲ್ಲಿ ಪ್ರಯೋಗ ಪ್ರಾರಂಭಿಸಲಾಗಿದೆ ಕಾರಣ ಆಸಕ್ತರು ತರಬೇತಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿಬಾಗವಹಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದರು. 

ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಅಭ್ಯೂದಯ ಪಿಯು ಸಾಯನ್ಸ್‌ ಕಾಲೇಜಿನಲ್ಲಿ ಮಂಗಳವವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೂರದ ಬೆಂಗಳೂರು, ಧಾರವಾಡ, ನವದೆಹಲಿಗೆ ಹೋಗಿ ತರಬೇತಿ ಪಡೆಯಲು ಸಾಧ್ಯವಾಗದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಪಾಲಿಗೆ ಸರ್ಕಾರ ಆಯೋಜಿಸಿರುವ ಈ ತರಬೇತಿ ಕಾರ್ಯಕ್ರಮವು ಆಶಾಕಿರಣವಾಗಲಿದೆ ಈ ನಿಟ್ಟಿನಲ್ಲಿ ವಿಶ್ರಾಂತ ಕುಲಪತಿ ಡಾ, ಎಚ್ ಬಿ ವಾಲಿಕಾರ ಅವರ ಮಾರ್ಗದರ್ಶನದಲ್ಲಿ ನಮ್ಮ ಶಿಕ್ಷಣ ಸಂಸ್ಥೆ ಈ ಸ್ಪಧಾತ್ಮಕ ಪರಿಕ್ಷೇಗಳಿಗೆ ಪೂರ್ವ ಸಿದ್ದತೆ ನಡೆಸಲು ಈ ತರಬೇತಿಯ ಉಸ್ತುವಾರಿ ವಹಿಸಿಕೊಂಡಿದೆ. ಇದರ ಜೊತೆಗೆ   ಬೆಂಗಳೂರಿನ ನುರಿತ ಪ್ರೋಪೆಸರ್ ಡಾ, ಕೆ ಅಶೋಕ, ಧಾರವಾಡದ ಸ್ಪರ್ಧಾ ಜೀನಿಯಸ್ ಅಕಾಡೆಮಿಯ ಸಿದ್ದನ್ನಾ ದಳವಾಯಿ, ಪ್ರೀಯಾಂಕಾ ವಿ ಪತ್ತಾರ, ಧಾರವಾಡದ ಶೇಖಪ್ಪ ಮೇಟಿ ಸೇರಿದಂತೆ ಇನ್ನೂ ಅನೇಕ ನುರಿತ ಬೋಧನಾ ಉಪನ್ಯಾಸಕರಿಂದ ವಿಷಯವಾರು ಪರಿಣತರಿಂದ ತರಬೇತಿ ನೀಡಲಾಗುತ್ತಿದೆ.   ಐಪಿಎಸ್, ಕೆಎಎಸ್ ಅಧಿಕಾರಿಗಳನ್ನೂ ಆಹ್ವಾನಿಸಿ ಪ್ರತಿ ವಾರ ಸಂವಾದ ನಡೆಸಲಾಗುತ್ತಿದೆ. 

ಐಎಸ್‌ಐ, ಐಪಿಎಸ್, ಕೆಎಎಸ್, ಬ್ಯಾಂಕಿಂಗ್, ಪಿಡಿಓ, ಪಿಎಸ್ ಐ, ಪೋಲಿಸ್, ಎಸ್‌ಡಿಎ, ಎಫ್‌ಡಿಎ,ಐ ಐಟಿ ಜಾಮ್ ಸೇರಿದಂತೆ ಹಲವು ರೀತಿಯ ಸ್ಪರ್ಧಾತ್ಮಕ  ಪರೀಕ್ಷೆಗಳನ್ನು ತಯಾರು ಮಾಡುವಲ್ಲಿನ ಅನುಭವಗಳು, ಪರೀಕ್ಷೆ ತಯಾರಿ ಹೇಗೆ ಇರಬೇಕು, ಸಂದರ್ಶನ ಹೇಗೆ ಎದುರಿಸಬೇಕು ಹಾಗೂ ಪರೀಕ್ಷೆ ತಯಾರಿಗಾಗಿ ಯಾವ ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂಬುದರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಧ್ಯ ‘ಉಚಿತ ತರಬೇತಿ ಶಿಬಿರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಮನೋಸ್ಥೈರ್ಯ ಹಾಗೂ ಆಕಾಂಕ್ಷೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.  

ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಬೇಕು ಎಂದು ಕೂಲಂಕೂಷವಾಗಿ  ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತಿದೆ. ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಅರಿವು ಮೂಡಿಸಲಾಗುವುದು. 

ನಮ್ಮ ಸಂಸ್ಥೆಯ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ತಮ್ಮ ಹೆಸರು ಪ್ರವೇಶಾತಿ ಪಡೆದು ದಾಖಲು ಮಾಡಲಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಅತ್ಯುತ್ತಮವಾದ ಬೋಧಕ ವರ್ಗ ಇದೆ. ಉತ್ತಮವಾಗಿ ಮಾರ್ಗದರ್ಶನ ನೀಡುತ್ತಿದ್ದು ಬಡ ವಿದ್ಯಾರ್ಥಿಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಮೂಡಿಸಲಿದೆ ಕಾರಣ ಆಸಕ್ತರು ಇದರ ಸದುಪಯೋಗ ಪಡೆಸಿಕೊಳ್ಳುವ ಮೂಲಕ ತಮ್ಮ ತಮ್ಮ ಶೈಕ್ಷಣಿಕ ಜೀವನ ಯಶಸ್ವಿಗೊಳಿಸಿಕೊಳ್ಳಲು ಮುಂದಾಗಬೇಕು ಎಂದರು.    

ಬಸವರಾಜ ಬಿಜ್ಜುರ, ಆಡಳಿತಾಧಿಕಾರಿ ಬಿ ಜಿ ಬಿರಾದಾರ, ಪದವಿ ಕಾಲೇಜಿನ ಪ್ರಾಂಶುಪಾಲ ಆರ್ ಎಸ್ ಜಡಗಿ, ಪ್ರಾಚಾರ್ಯ ಎಂ ಎಂ ಧನೂರ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ ಬಿರಾದಾರ, ಉಪನ್ಯಾಸಕ ರಂಗಸ್ವಾಮಿ ಎಸ್,ವಿರೇಶ ಹುಲಿಕೆರಿ, ರವಿ ಛಲವಾದಿ, ಬಸವರಾಜ ಗುದಲಮನಿ ಸೇರಿದಂತೆ ಹಲವರು ಇದ್ದರು.