ನ.29 ರಂದು ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಸಂಗೀತ ರಸ ಮಂಜರಿ

ಕುಷ್ಟಗಿ.ನ.28;  ಶ್ರೀಬನ್ನಿ ಮಹಾಂಕಾಳಿದೇವಿಯ ಮಹಾಭಿಷೇಕದ ಪ್ರಯುಕ್ತ ಭಗತ್ ಸಿಂಗ್ ಸಂಸ್ಥೆ ಹಾಗೂ ಬನ್ನಿ ಮಹಾಂಕಾಳಿ ಸೇವಾ ಸಮಿತಿ ವತಿಯಿಂದ ಸರ್ವ ಧರ್ಮ ಶ್ರೀಗಳ ಸಾನಿಧ್ಯದಲ್ಲಿ ನ.29 ಬುಧವಾರ ಮಧ್ಯಾಹ್ನ 12:13ಕ್ಕೆ ಇಲ್ಲಿನ ಸಂತೆ ಬಜಾರ್ ನಲ್ಲಿ ಇರುವ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಸಂಜೆ ವಿಷ್ಣುತೀರ್ಥ ನಗರದಲ್ಲಿ ಭವ್ಯ ರಂಗ ವೇದಿಕೆಯಲ್ಲಿ ಬೆಂಗಳೂರಿನ ವಿ.ಬಿ   

ಮೂಸ್ಯಿಕಲ್ ಇವೆಂಟ್ಸ್‌ ಹಾಗೂ ಡಾ.ಕೆ ಜಯಲಕ್ಷ್ಮಿ ಜಿತೇಂದ್ರ ಕೈಲಾಸ ಕಲಾಧರ ಕಲ್ಚರಲ್ ಮತ್ತು ಚಾರಾಟೇಬಲ್ ಟ್ರಸ್ಟ್‌ ಇವರ ವತಿಯಿಂದ ಸಂಗೀತ ರಸ ಮಂಜರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ, ಶಿರಗುಂಪಿ ಗ್ರಾಮದ ನಂದಿನಿ ಅಗಸರ 2023  ಓಲಂಪಿಕ್ಸ್‌ ನಲ್ಲಿ ಕಂಚಿನ ಪದಕ ವಿಜೇತೆಗೆ ಸನ್ಮಾನಿಸಲಾಗುತ್ತದೆ ಎಂದು ಕಾರ್ಯಕ್ರಮ ಆಯೋಜಕ ಹಾಗೂ ಭಗತ್ ಸಿಂಗ್ ಸಂಸ್ಥೆ ಅಧ್ಯಕ್ಷ ವಜೀರ್ ಅಲಿ .ಬಿ. ಗೋನಾಳ ಹೇಳಿದರು.  

ಮಂಗಳವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  

ಬುಧವಾರ ಬೆಳಿಗ್ಗೆ ವಿಷ್ಣುತೀರ್ಥ ನಗರದಲ್ಲಿ ಆಯೋಜಿಸಲಾದ ಧಾರ್ಮಿಕದಲ್ಲಿ ಮದ್ದಾನಿಹಿರೇಮಠದ ಕರಿಬಸವ ಶಿವಾಚಾರ್ಯರು, ಎಂ.ಗುಡದೂರಿನ ನೀಲಕಂಠ ತಾತನವರು, ವಿರಕ್ತಮಠ ಬಿಜಕಲ್‌ನ ಶಿವಲಿಂಗ ಸ್ವಾಮಿಗಳು, ಚಳಗೇರಿ ಹಿರಮಠದ ವೀರಸಂಗಮೇಶ್ವರ ಸ್ವಾಮಿಗಳು, ಅಂಕಲಿಮಠದ, ವೀರಭದ್ರ ಸ್ವಾಮಿಗಳು, ಅನ್ನದಾನೇಶ್ವರ ಶಾಖಾಮಠಗಳ ಉಸ್ತುವಾರಿ ಮಹಾದೇವ ಮಹಾಸ್ವಾಮಿಗಳು, ಮುದೇನೂರ ಮರಳುಸಿದ್ದ ದೇವರು, ನಿಡಶೇಸಿ ವಿಶ್ವರಾಧ್ಯ ದೇವರು, ಬಾಗಲಕೋಟೆ ಸಿದ್ರಾಫೌಂಡೇಶನ್ ಮೌಲಾನಾ ಮುಪ್ತಿ  ಅಹ್ಮದ್ ಫಾರುಕ್ ನೂರಾನಿ ಸಖಾಫೀ ದಿವ್ಯ ಸಾನಿಧ್ಯವಹಿಸುವರು. ಬೆಂಗಳೂರಿನ ನಮ್ಮನೆ ಸುಮ್ಮನೆ ನಿರಾಶಿತರ ಆಶ್ರಮದ ಅಧ್ಯಕ್ಷೆ ಡಾ.ನಕ್ಷತ್ರ ಕಾರ್ಯಕ್ರಮವನ್ನು ಉದ್ಘಾಟಿಸುವರು.  

ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್  ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಬೆಂಗಳೂರಿನ ಚಿತ್ರ ನಿರ್ಮಾಪಕ ಸುರೇಶಗೌಡ್ರು, ಉದ್ಯಮಿ ಕೆ.ಕೆ ಪೂಣ್ರೇಶ್, ಮಾಜಿ ಸಚಿವ ಅಮರೇಗೌಡ ಪಾಟೀಲ್  ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕೆ.ಎಸ್ ಆಸ್ಪತ್ರೆ ಮುಖ್ಯಸ್ಥ ಬಸವರಾಜ ಕೆ ಹಾಗೂ ಇನ್ನಿತರೆ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.