ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಜಮಖಂಡಿ 28: ನಗರದ ಟಿಪ್ಪು ಸುಲ್ತಾನ ಸರ್ಕಲ್ ಬಳಿ ಯುವಕನ ಮೇಲೆ ವಿಜಯಪೂರ ಮೂಲದ ಯುವಕರಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ. 

ನಗರದ ಟೀಚರ್ ಕಾಲೋನಿಯ ನಿವಾಸಿ ಪ್ರಜ್ವಲ ಬಾಬು ಜಗದಾಳ (24) ಟಿಪ್ಪು ಸುಲ್ತಾನ ಸರ್ಕಲ್ ಬಳಿ ಇದ್ದ ಸಮಯದಲ್ಲಿ ವಿಜಯಪೂರ ಮೂಲದ ಕೆಲವು ಯುವಕರ ತಂಡವೂಂದು ಬಂದು ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದಾರೆಂದು ತಿಳಿದು ಬಂದಿರುತ್ತದೆ.  

ಕಳೆದು ಕೆಲವು ದಿನಗಳ ಹಿಂದೆ ಜಿ,ಜಿ,ಹೈಸ್ಕೂಲ್ ಮೈದಾನದಲ್ಲಿ ಶ್ವಾನಗಳ ಪ್ರದರ್ಶನ ನಡೆದಿದ್ದು. ನಮ್ಮ ಶ್ವಾನ ಪ್ರಥಮ ಸ್ಥಾನದಲ್ಲಿ ಬಂದಿದೆಂದು, ಸ್ಥಳಿಯ ಯುವಕರಿಗೂ ಹಾಗೂ ವಿಜಯಪೂರ ಯುವಕರಿಗೂ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಸುವ ಹಂತಕ್ಕೆ ತಲುಪ್ಪಿದ ಹಿನ್ನಲೆಯಲ್ಲಿ. ಅದೇ ಕೋಪದಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿರುತ್ತದೆ. 

ಪ್ರಜ್ವಲ ಬಾಬು ಜಗದಾಳ ಅವರಿಗೆ ತಲೆಭಾಗಕ್ಕೆ ಗಂಭೀರ ಗಾಯವಾಗಿದ್ದ ಕಾರಣ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿಲಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ರವಾನಿಸಲಾಗಿದ್ದು ಹೇಳಲಾಗಿದೆ. 

ಈ ಕುರಿತು ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದು. ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ. ನಿಖರವಾದ ಮಾಹಿತಿ ಇನ್ನೂ ತಿಳಿದ್ದು ಬಂದಿರುವುದಿಲ್ಲ.