ಬೆಳೆಗಳನ್ನು ಸರ್ಕಾರ ಖರೀದಿಸುವಂತೆ ರೈತರ ಒತ್ತಾಯ
ಲೋಕದರ್ಶನವರದಿ
ಕುರುಗೋಡು. 11 :ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತೋಟಗಾರಿಕೆ ರೈತರು ಹಾಗೂ ಚಾಲಕರ ಸಭೆ ನಡೆಯಿತು.
ತಹಶೀಲ್ದಾರ್ ಮಲ್ಲೇಶಪ್ಪ ಸಭೆ ಉದ್ದೇಶಿಸಿ ಮಾತನಾಡಿ, ಕೊರೋನಾ ವೈರಸ್ ಬೀತಿಯಿಂದ ದೇಶವೇ ಲಾಕಡೌನ್ ಆಗಿದ್ದರೂ, ಸಕರ್ಾರದ ಆದೇಶ ಮೇರೆಗೆ ತೋಟಗಾರಿಕೆ ರೈತರು ಬೆಳೆದಿರುವ ಹಣ್ಣುಗಳನ್ನು ಹೊರ ರಾಜ್ಯ ಹಾಗೂ ಬೇರೆಡೆಗೆ ಮಾರಾಟ ಮಾಡಲು ಅನುಕೂಲ ಕಲ್ಪಿಸಿದೆ. ಕೊರೊನಾ ವೈರಸ್ಗೆ ತುತ್ತಾಗದಂತೆ ಮುಂಜಾಗೃತಿಯಾಗಿ ಮಾರಾಟ ಮಾಡಲು ಕಳುಹಿಸದ ಲಾರಿ, ಅಟೋ ಚಾಲಕರಿಗೆ ಸ್ವಚ್ಛತೆಯಿಂದರಬೇಕು. ಬ್ಲಿಚಿಂಗ್ ಪೌಡರ್ನಿಂದ ಆಟೋ, ಲಾರಿಗಳನ್ನು ಶುದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕನರ್ಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿಎಸ್.ಶಿವಶಂಕರ್ ಮಾತನಾಡಿ, ತೋಟಗಾರಿಕೆ ರೈತರ ಬೆಳೆಗಳನ್ನು ಸಕರ್ಾರ ಎಪಿಎಂಸಿ ಆಪಕಾಮ್ಸ್ ವತಿಯಿಂದ ಖರೀದಿಸಬೇಕು ಆಗ ರೈತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ತೋಟಗಾರಿಕೆ ಇಲಾಖೆ ಸಹಾಯಕ ನಿದರ್ೇಶಕ ಬಿ.ಮುಕ್ಬುಲ್ ಹುಸೇನ್, ರೈತರ ವಾಸ್ತವ ಸ್ಥಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು, ಅವರ ಆದೇಶದಂತೆ ಪಾಲಿಸುತ್ತೇವೆ ಎಂದರು.
ಶ್ರೀನಿವಾಸ್ ಕ್ಯಾಂಪ್, ಮುಷ್ಟಗಟ್ಟೆ, ಕೆರೆಕೆರೆ, ಲಕ್ಷ್ಮಿಪುರ, ಸೋಮಲಾಪುರ ಗ್ರಾಮಗಳ ತೋಟಗಾರಿಕೆ ರೈತರು, ಕನರ್ಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದಶರ್ಿ ಗಾಳಿ ಬಸವರಾಜ್, ಸೋಮಪ್ಪ, ಹುಲೇಪ್ಪ ಹಾಗೂ ಇನ್ನಿತರರು ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 