ರೈತ ಸಂಘ ಸ್ಥಾಪನೆಯಿಂದ ರೈತರ ಸಮಸ್ಯ ಪರಿಹಾರ :ಚೂನಪ್ಪ ಪೂಜೇರಿ
Farmers' problems resolved through the establishment of the Farmers' Association: Chunappa Pujeri
ನೇಸರಗಿ 19: ರೈತ ಸಂಘಟನೆಗಳನ್ನು ಗ್ರಾಮಗಳಲ್ಲಿ ಸ್ಥಾಪಿಸುವದರಿಂದ ರೈತರ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬಹುದೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಹೇಳಿದರು. ವಣ್ಣೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಶಾಖೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಚೂನಪ್ಪ ಪೂಜೇರಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಪ್ರಯತ್ನಿಸದಿದ್ದರೆ ರೈತಸಂಘದ ಸದಸ್ಯರ ಒಗ್ಗಟ್ಟಿನ ಹೋರಾಟದಿಂದ ಸಾದ್ಯ. ಚಚಡಿ ಏತ ನೀರಾವರಿ ಯೋಜನೆಯನ್ನು ಎಲ್ಲ ಗ್ರಾಮಗಳಿಗೆ ಅನುಷ್ಠಾನಗೊಳಿಸಬೇಕು.ಶೀಘ್ರ ಚಚಡಿ ಏತ ನೀರಾವರಿ ಯೋಜನೆ ಅನುಷ್ಡಾನಕ್ಕೆ ಆಗ್ರಹಿಸಿ ನೇಸರಗಿ - ಬಾಗಲಕೋಟ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಚಚಡಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಡಿದ ಸಾಧಕರನ್ನು ಸತ್ಕರಿಸಲಾಯಿತು.ರೈತ ಸಂಘದ ಮುಖಂಡರಾದ ಪ್ರೇಮ ಚೌಗಲಾ, ಸತ್ತೇಪ್ಪ ಮಲ್ಲಾಪುರಿ, ಸಿದಲಿಂಗಪ್ಪ ಪೂಜೇರಿ, ಸಿದ್ದರಾಯ ಪರಸಣ್ಣವರ, ಕುಮಾರ ತಿಗಡಿ, ವಾಸು ಪಾಂಡೋಳ್ಳಿ,ಬೀರ್ಪ ತೋಳಿನವರ,ಮಂಜುನಾಥ ವಣ್ಣೂರ , ರಾಯಪ್ಪ ಗೌಡಪ್ಪಗೊಳ , ಹಾಗು ವಣ್ಣೂರ್, ಸುನಕುಂಪಿ, ಮಾಸ್ತಮರಡಿ ಗ್ರಾಮದ ರೈತ ಬಾಂಧವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 