ಸಾಲ ಬಾಧೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆಗೆ ಶರಣು
Farmer commits suicide due to debt
ಬೆಳಗಾವಿ : ಸಾಲ ಬಾಧೆ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ರೈತನೋರ್ವ ತನ್ನ ಮನೆ ಲೀಲಾವು ಮಾಡುತ್ತಾರೆಂದು ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ನಡೆದಿದೆ.
ನಿಡಸೋಸಿ ಗ್ರಾಮದ ವೀರಭದ್ರ ಮಾದನ್ನವರ (42) ಆತ್ಮಹತ್ಯೆ ಗೆ ಶರಣಾದ ರೈತನಾಗಿದ್ದಾನೆ. ಸಾಲಬಾಧೆಯಿಂದ ಜಿಗುಪ್ಸೆ ಗೊಂಡು ತನ್ನ ಪತಿ ಆತ್ಮಹತ್ಯೆ ಗೆ ಶರಣಾಗಿರುವದಾಗಿ ರೈತನ ಪತ್ನಿ ಸಂಕೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ಗಂಡನಾದ ವೀರಭದ್ರ ಮಾದನ್ನವರ ಇವರು ಜಮೀನು ಸಾಗುವಳಿ ಹಾಗೂ ಹೈನುಗಾರಿಗೆ ಮಾಡಲು ವಿವಿಧ ಬ್ಯಾಂಕುಗಳಲ್ಲಿ ಅಂದರೆ ದಿ. ಕಮುನಿಟಿ ಫೈನಾನ್ಸ್ ಪ್ರವೇಟ ಅಮಿಟೆಡ್ ಆಫೀಸ ಠಾಣಿ, ಮುಂಬೈ ಬ್ರಾಂಚ ಚಿಕ್ಕೋಡಿ ಹೆಡ್ ಆಫೀಸ ಬೆಳಗಾವಿ ಬ್ಯಾಂಕಿನಲ್ಲಿ 8,೦೦,೦೦೦ ರೂಪಾಯಿ, ಶ್ರೀ ದುರದುಂಡೇಶ್ವರ ಅರ್ಬನ್ ಕ್ರೆಡಿಟ್ಸೌಹಾರ್ದ ಸಹಕಾರಿ ಸಂಘ ನಿಯಮಿತ ನಿಡಸೋಸಿಯಲ್ಲಿ 1,50,000 ರೂಪಾಯಿ, ಕರ್ನಾಟಕ ವಿಕಾಸ ಗ್ರಾಮೀಣಬ್ಯಾಂಕ ನಿಡಸೋಸಿಯಲ್ಲಿ 80,000 ರೂಪಾಯಿ, ಐ.ಡಿ.ಎಪ್.ಸಿ ಬ್ಯಾಂಕ ಚಿಕ್ಕೋಡಿಯಲ್ಲಿ 30,000 ರೂಪಾಯಿ,ದರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ನಿಡಸೋಸಿಯಲ್ಲಿ 90,000 ಸಾವಿರ ರೂಪಾಯಿ ಹೀಗೆ ಒಟ್ಟು 11 ಲಕ್ಷ 50 ಸಾವಿರ ರೂಪಾಯಿ ಸಾಲ ಮಾಡಿ ಈ ವರ್ಷ ಜಮೀನದಲ್ಲಿ ಸರಿಯಾಗಿ ಬೆಳೆ ಬಾರದೇ ಇದ್ದುದರಿಂದ ಹಾಗೂ ಹೈನುಗಾರಿಕೆ ಮಾಡಲು ಖರೀದಿ ಮಾಡಲು 05 ಆಕಳುಗಳು ತೀರಿಕೊಂಡಿದ್ದರಿಂದ ನಷ್ಟ ಅನುಭವಿಸಿ ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತಾ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಪೆ ಹೊಂದಿ ದಿ: 1 ರಂದು ರಾತ್ರಿ ನಿಡಸೋಸಿ ಗ್ರಾಮ ಹದ್ದಿಯ ತನ್ನ ಜಮೀನದಲ್ಲಿರುವ ಮನೆಯಲ್ಲಿ ಹಗ್ಗದಿಂದ ನೇಣುಹಾಕಿಕೊಂಡು ತೀರಿಕೊಂಡಿರುವದಾಗಿ ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡಿರುವ ಸಿಪಿಐ ಶಿವಶರಣ ಅವಜಿ ಅವರು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 