ಕುಡಿಯುವ ನೀರಿನ ಪೂರೈಕೆ ಸಮಸ್ಯೆ, ತುರ್ತು ಸಭೆ

ರೋಣ  22:  ತಾಲೂಕಿನ ಹೊಳೆಆಲೂರು ಹೋಬಳಿಯ ಭಾಗದ ಅಮರಗೋಳ,ಹೊಳೆ ಆಲೂರು, ಮೆಣಸಗಿ ಹಾಗೂ ಹೊಳೆ ಮಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಸಂಬಂಧ ತುರ್ತು ಸಭೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿ ರೋಣ ಅವರ ಅಧ್ಯಕ್ಷತೆಯಲ್ಲಿ ಹೊಳೆ ಆಲೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.  

ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕುಡಿಯುವ ನೀರಿನ ಪೂರೈಕೆ ನಿರ್ವಹಣೆ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಇರುವ ಮಾರ್ಗಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.ನೀರಗಂಟಿಗಳು ಸದ್ಯ ನೀರಿನ ಲಭ್ಯತೆಯ ಕೊರತೆ ಹಿನ್ನೆಲೆಯಲ್ಲಿ ಗ್ರಾಮದ ನಿವಾಸಿಗಳಿಗೆ ನೀರು ಮಿತ ಬಳಕೆ ಬಗ್ಗೆ ಮನವರಿಕೆ ಮಾಡಿ ಸರಿಯಾದ ರೀತಿಯಲ್ಲಿ ಕುಡಿಯುವ ನೀರಿನ ಪೂರೈಕೆ ಮತ್ತು ನಿರ್ವಹಣೆ ಮಾಡುವಂತೆ ತಿಳಿಸಲಾಯಿತು.  

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರೋಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಜಗದೀಶ್ ಬಿ ಮಡಿವಾಳರ ಅವರು ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗಳಿಗೆ ಇಲಾಖೆಯ ಕಡೆಯಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳು ವುದಾಗಿ ಹೇಳಿದರು.  

ಆಃಓಖಿ ಎಂಡಿ ದೇವರಾಜ್ ದೇಸಾಯಿ ಅವರು ಮಾತನಾಡಿ ಕೊನೆಯ ಭಾಗದ ಗ್ರಾಮಗಳಿಗೆ ಸಮರ​‍್ಕವಾಗಿ ನೀರು ಒದಗಿಸಲು ಅಗತ್ಯ ಕ್ರಮ ಜರೂರಾಗಿ ಕೈಗೊಂಡು ಸ್ಥಳೀಯ ಆಡಳಿತಕ್ಕೆ ಸಹಕಾರ ನೀಡುವುದಾಗಿ ಹೇಳಿದರು.ಸಂಬಂಧ ಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಡಿಓ ಅವರು ಭಾಗವಹಿಸಿ ತಮ್ಮ ತಮ್ಮ ಭಾಗದ ಕುಡಿಯುವ ನೀರಿನ ಪೂರೈಕೆ ನಿರ್ವಹಣೆ ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಗ್ರಾಮ ಅಭಿವೃದ್ದಿ ಅಧಿಕಾರಿಗಳು ಹಾಗೂ ಎಲ್ಲಾ ಪಂಚಾಯತಿಗಳ ನೀರಗಂಟಿಗಳು ಹಾಜರಿದ್ದರು.