23-24ರಂದು ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾ ಮೇಳ
Drama Festival and Cultural Arts Festival on 23-24
ಬೆಂಗಳೂರು 20: ವಿ.ಕೆ.ಎಂ. ಕಲಾವಿದರು ಬೆಂಗಳೂರು ಹಾಗೂ ಐಟಿಸಿ ಕನ್ನಡ ಲಲಿತ ಕಲಾ ಸಂಘ ಬೆಂಗಳೂರು ಮತ್ತು ಓರಿಸ್ಸಾ ಕನ್ನಡ ಸಂಘದ ಸಹಕಾರದಲ್ಲಿ ಓರಿಸ್ಸಾ ಪೂರಿ ಅನ್ನಪೂರ್ಣ ಕಲಾಮಂದಿರದಲ್ಲಿ ದಿ..23 ಮತ್ತು 24 ರಂದು 45ನೇ ವರ್ಷದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಲಾ ಮೇಳ 2026 ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆಯನ್ನು ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ಪೂರಿಜಗನ್ನಾಥ ದೇವಸ್ಥಾನ ಮಂಡಳಿ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಮೋಹನ್ ರಾವ್ ಜಂಟಿ ನಿರ್ದೇಶಕರು, ವಾರ್ತಾ ಇಲಾಖೆ, ಒರಿಸ್ಸಾ ಸರ್ಕಾರ, ವಿದೂಷಿ ಶ್ರೀಮತಿ ಶ್ಯಾಮಲಾ ದೇವಿ ಖ್ಯಾತ ಭರತನಾಟ್ಯ ಕಲಾವಿದರು, ಶ್ರೀ ಸಿ.ಎಂ. ತಿಮ್ಮಯ್ಯ ಪ್ರಧಾನ ಕಾರ್ಯದರ್ಶಿಗಳು, ವಿ.ಕೆ.ಎಂ. ಕಲಾವಿದರು, ಬೆಂಗಳೂರು ಆಗಮಿಸುವರು.ದಿ 23 ರಂದು ಕಲಾಮೇಳ, ಡೊಳ್ಳು ಕುಣಿತ, ನಂದಿಕಂಭ, ಮೆರವಣಿಗೆ, ಗಾಯನ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ದಿ.24 ರಂದು ಐ.ಟಿ.ಸಿ. ಕನ್ನಡ ಲಲಿತ ಕಲಾ ಸಂಘ, ಬೆಂಗಳೂರು ಇವರಿಂದ ಸಾಮಾಜಿಕ ನಾಟಕಹೆಬ್ಬೆಟ್ಟು ತಂದ ಎಡವಟ್ಟು ಪ್ರದರ್ಶನವಿದೆ.ನಿರ್ದೇಶನ : ಸಿ.ಎಂ. ತಿಮ್ಮಯ್ಯವಿ.ಕೆ.ಎಂ. ಕಲಾವಿದರು, ಬೆಂಗಳೂರು ರವರಿಂದ ಜಾನಪದ ನಾಟಕ ಸಾಕ್ಷಿಕಲ್ಲು ಪ್ರದರ್ಶವಿದೆ.ಜ್ಞಾನವಿ ಸಂಗೀತ ಹಾಗೂ ನಾಟಕ ಶಾಲೆ ರವರಿಂದ ದಿ.14-07-2026 ರಂದು ಸಂಜೆ 6.00 ಗಂಟೆಗೆನಯನ ರಂಗಮಂದಿರ, ಬೆಂಗಳೂರು ಗೊ.ರು. ಚನ್ನಬಸಪ್ಪರವರ ಸಾಕ್ಷಿಕಲ್ಲು ನಾಟಕ ಪ್ರದರ್ಶನವಿದೆ.ಸಂಗೀತ ಮತ್ತು ನಿರ್ದೇಶನ : ಲಕ್ಷ್ಮಣ್ ಸುವರ್ಣಸಹ ನಿರ್ದೇಶನ : ತಿಮ್ಮಯ್ಯ ನೀಡಿದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 