ಕಾಂಗ್ರೆಸ್ ವೈದ್ಯಕೀಯ ಘಟಕ ತಾಲೂಕಧ್ಯಕ್ಷರಾಗಿ ಡಾ.ನಾಲಬಂದ ನೇಮಕ

ತಾಳಿಕೋಟಿ 22: ಪಟ್ಟಣದ ಖ್ಯಾತ ಯುವ ವೈದ್ಯ ಡಾ. ಅಬ್ದುಲ್ ಖಾದರ ಅಬ್ದುಲ್ ರೆಹಮಾನ ನಾಲಬಂದ ಇವರನ್ನು ತಾಲೂಕ ಕಾಂಗ್ರೆಸ್ ವೈದ್ಯಕೀಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಮಹೇಶ ಎಸ್‌. ಗಾಯಕವಾಡ ಆದೇಶ ಹೊರಡಿಸಿದ್ದಾರೆ.  

ಡಾ. ಎ.ಎ.ನಾಲಬಂದ ಅವರು ತಮ್ಮ ವೈದ್ಯಕೀಯ ವೃತ್ತಿಯ ಜೊತೆಗೆ ಹೊಂದಿರುವ ಸಾಮಾಜಿಕ ಕಳಕಳಿ ಹಾಗೂ ಹಲವಾರು ಸಂಘ ಸಂಸ್ಥೆಗಳೊಂದಿಗೆ ಕೂಡಿಕೊಂಡು ಕ್ರಿಯಾಶೀಲತೆಯಿಂದ ನಿರ್ವಹಿಸುತ್ತಿರುವ ಸಮಾಜ ಸೇವಾಕಾರ್ಯಗಳನ್ನು ಗುರುತಿಸಿ ಅವರನ್ನು ತಾಲೂಕ ಕಾಂಗ್ರೆಸ್ ವೈದ್ಯಕೀಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜಿಲ್ಲಾ ಅಧ್ಯಕ್ಷ ಡಾ. ಮಹೇಶ್ ಗಾಯಕವಾಡ ಅವರು ತಮ್ಮ ಆದೇಶ ಪತ್ರದಲ್ಲಿ ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯಾಧ್ಯಕ್ಷ ಡಾ. ಮಧುಸೂದನ್ ಹಾಗೂ ರಾಜ್ಯ ಘಟಕದ ಕಾರ್ಯದರ್ಶಿ ಡಾ. ರವಿಕುಮಾರ ಬಿರಾದಾರ ಇವರ ನಿರ್ದೇಶನದ ಮೇರೆಗೆ ಡಾ.ಎ.ಎ.ನಾಲಬಂದ ಇವರನ್ನು ತಾಲೂಕ ಕಾಂಗ್ರೆಸ್ ವೈದ್ಯಕೀಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು ಅವರು ಈ ಕೂಡಲೇ ತಮ್ಮ ಅಧಿಕಾರವನ್ನು ವಹಿಸಿಕೊಂಡು ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ನಾಯಕರುಗಳ ಮತ್ತು ಮುಖಂಡರುಗಳ ಸಹಕಾರದೊಂದಿಗೆ ತಮಗೆ ವಹಿಸಿಕೊಡಲಾಗಿರುವ ಜವಾಬ್ದಾರಿಯನ್ನು ನಿರ್ವಹಿಸಿ ಜಿಲ್ಲಾ ಕಾಂಗ್ರೆಸ್ ವೈದ್ಯಕೀಯ ಘಟಕದ ಸಂಘಟನೆಗೆ ಶ್ರಮಿಸುವಂತೆ ಸೂಚಿಸಿದ್ದಾರೆ.