ಜಲಾಲಪೂರ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ

ರಾಯಬಾಗ 15: ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ರವರ 133ನೇ ಜಯಂತಿಯನ್ನು ರವಿವಾರ ಆಚರಿಸಲಾಯಿತು. ಗ್ರಾ.ಪಂ.ಉಪಾಧ್ಯಕ್ಷ ಮೌಲಾ ನದಾಫ್, ಗ್ರಾಮದ ಮುಖಂಡರಾದ ಸದಾಶಿವ ಜಗದಾಳೆ, ರಾಜು ಜಾಧವ, ರಾಜು ಮುರಚಿಟ್ಟೆ, ಮಲ್ಲು ಜಗದಾಳೆ, ಬಸು ಅವಣ್ಣವರ, ನಾನಾಸಾಬ ಸೋನಾರ, ಅರ್ಜುನ ಮಾನೆ, ಗೀರೀಶ್ ಪಾಟೀಲ್, ಮುತ್ತಪ್ಪ ದಾಸರ,ಮಹದೇವ ಜಾಗನೂರೆ, ಗೋವಿಂದ್ ಭಜಂತ್ರಿ, ದೀಲೀಪ ಪವಾರ, ಪವನ ಕೋಣೆ ನಾರಾಯಣ ಮಾನೆ, ಪುಂಡಲೀಕ ಹಿಡಕಲ್, ಸಂಜು ಜಾದವ್, ಪಾಂಡುರಂಗ ಹವಾಲ್ದಾರ್, ಪರಶುರಾಮ ಕಾಂಬಳೆ, ಉತ್ತಮ ಕಾಂಬಳೆ, ನಾಮದೇವ ಕಾಂಬಳೆ, ವಸಂತ ಕಾಂಬಳೆ, ಸುರೇಶ ಕಾಂಬಳೆ, ಸಾಗರ ಕಾಂಬಳೆ, ರಾಮಚಂದ್ರ ಕುರಣೆ ಸೇರಿದಂತೆ ಅನೇಕರು ಇದ್ದರು.