ಪ್ರೆಸ್ ಕ್ಷಬ್ಗೆ ದೇಣಿಗೆ: ಕುಂಬಾರ, ಪತ್ತೆಪೂರಗೆ ಸನ್ಮಾನ
ರಾಮದುರ್ಗ 10: ಪ್ರೆಸ್ ಕ್ಷಬ್ ರಾಮದುರ್ಗಕ್ಕೆ ನೂತನ ಕಂಪ್ಯೂಟರ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿದ ವಿಶ್ವನಾಥ ಕುಂಬಾರ ಹಾಗೂ ಸುರೇಶ ಪತ್ತೆಪೂರ ಅವರಿಗೆ ಪ್ರೆಸ್ ಕ್ಲಬ್ದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಪುರಸಭೆ ಅಧ್ಯಕ್ಷ ಸುರೇಶ ಪತ್ತೆಪೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಿಕಾ ಬಳಗದೊಂದಿಗೆ ದಶಕಗಳಿಂದಾ ಉತ್ತಮ ಬಾಂಧವ್ಯ ಹೊಂದಿದ್ದೇನೆ ಕ್ಲಬಿಗೆ ಅಗತ್ಯವಿರುವ ಕುಡಿಯುವ ನೀರಿನ ಟ್ಯಾಂಕದ ಅವಶ್ಯಕತೆ ಅರಿತು ನೀಡಿದ್ದೇನೆ ಎಂದರು.
ಈಶ್ವರ ಕಂಪ್ಯೂಟರ್ಸ ಮಾಲೀಕ ವಿಶ್ವನಾಥ ಕುಂಬಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ವ್ಯಾಪಾರದ ಅಭಿವೃದ್ದಿ ಪತ್ರಿಕಾ ಬಂಧುಗಳು ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ. ಹಾಗಾಗಿ ಕಂಪ್ಯೂಟರ ಅವಶ್ಯಕತೆ ಅರಿತು ಕ್ಲಬ್ಗೆ ಕೊಡುಗೆಯಾಗಿ ನೀಡಿದ್ದೇನೆ ಎಂದು ಹೇಳಿದರು,
ಪ್ರೆಸ್ ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಬ. ಧುಪದ ಕ್ಲಬ್ಗೆ ದೇಣಿಗೆ ನೀಡಿದ ಮಹನೀಯರಿಗೆ ಸನ್ಮಾನಿಸಿ ಅಭಿನಂದಿಸಿದರು. ಖಜಾಂಚಿ ಜೆ ಬಿ ಮೇಲಪ್ಪಗೋಳ ಸದಸ್ಯರಾದ ಮಲ್ಲಿಕಾರ್ಜುನ ಗೊಂದಿ, ಗುರಲಿಂಗ ಮುನವಳ್ಳಿ, ವಾಯ್ ಎಚ್ ಮುನವಳ್ಳಿ. ಶಿವರಡ್ಡಿ ಜಗಾಪೂರ, ಗೋವಿಂದ ಮೋಡಕ, ಈರನಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ರವಿ ಸದಾಶಿವನವರ. ಹಣಮಂತ ಹಲಗಿ, ಆನಂದ ಲಮಾಣಿ ಇದ್ದರು.