ಮಡಿವಾಳಪ್ಪ ಬೀದರಗಡ್ಡಿ ಅವರ ಹುಟ್ಟುಹಬ್ಬದ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
Distribution of fruits to patients on the occasion of Madiwalappa Beedaragaddi's birthday
ಯರಗಟ್ಟಿ 30 : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸವದತ್ತಿ ಎಲ್ಲಮ್ಮ ಮತಕ್ಷೇತ್ರದ ಭಾಜಪಾ ಮುಖಂಡರಾದ ಮಡಿವಾಳಪ್ಪ ಬೀದರಗಡ್ಡಿ ಅವರ 46ನೇ ಹುಟ್ಟುಹಬ್ಬದ ನಿಮಿತ್ಯ ಅವರ ಅಭಿಮಾನಿ ಬಳಗದ ವತಿಯಿಂದ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಅವರ ಅಭಿಮಾನಿಗಳು ಹಾಗೂ ಬಾರತೀಯ ಜನತಾ ಪಾರ್ಟಿ ಮುಖಂಡರು ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಮುಖಂಡರಾದ ಸದಾನಂದ ಹಣಬರ ಮಾತನಾಡಿದ ಅವರ ಸಾಮಾಜಿಕ ಸೇವೆ ಪರಗಣಿಸಿ ಮುಂದಿನ ದಿನಮಾನಗಳಲ್ಲಿ ಇವರಿಗೆ ಎಲ್ಲರೂ ಆಶೀರ್ವಾದ ಮಾಡಬೇಕು ಮತ್ತು ಸವದತ್ತಿ ಎಲ್ಲಮ್ಮ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ತೆರಳಿ ಶುಭ ಹಾರೈಸೋಣ ಎಂದು ಹೇಳಿದರು.
ಮಾಜಿ ಕುಮಾರ ಹಿರೇಮಠ ಮಾತನಾಡಿ ಸಾಮಾಜಿಕ ಸೇವೆ ಮಾಡುತ್ತಾ ನೂರಾರು ಕಾಲ ಸುಖವಾಗಿ ಬಾಳಿರಿ ಹೀಗೆ ಜನಸೇವೆ ನಿರಂತರವಾಗಿ ಇರಲಿ ಎಂದು ಹೇಳಿದರು.ಈ ಸಂಧರ್ಭದಲ್ಲಿ ಮುಖಂಡರುಗಾಳದ ಇಮಾಮಸಾಬ ಹುಸೇನನೈಕರ, ಡಾ, ವಿಶ್ವನಾಥ ತಾಂವಶಿ, ಶಂಕರ ಮುಗಳಿ, ಅಣ್ಣಾಸಾಹೇಬ ಸುಭೇದಾರ, ಇಮ್ತಿಯಾಜ್ ಖಾದ್ರಿ, ಮುದಕಪ್ಪ ತಡಸಲೂರ, ಈರಣ್ಣ ಮಠಪತಿ, ದುಂಡಯ್ಯ ಹಿರೇಮಠ, ಬಾಪುಗೌಡ ಪಾಟೀಲ್, ಶಿವಾನಂದ್ ಪಟ್ಟಣಶೆಟ್ಟಿ, ವಾಸಿಂ ರಾಜೇಖಾನ, ಉದ್ದಪ್ಪ ಹಾರುಗೋಪ್ಪ, ಬಾಬು ಚನ್ನಮೇತ್ರಿ, ಶಂಕರ ದಠೇನ್ನವರ ಹಾಗೂ ಮಹಿಳಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 