ಕ್ರಿಕೆಟ್ನಲ್ಲಿ ವಿಜೇತ ತಂಡಕ್ಕೆ ಕಪ್ ವಿತರಣೆ
ಕಾರಟಗಿ 07: ಸಮೀಪದ 28ನೇ ಕಾಲುವೆ (ತೊಂಡಿಹಾಳ) ಗ್ರಾಮದ ಡಿಸಿಸಿ ಕ್ರಿಕೆಟ್ ಕಮಿಟಿ 28ನೇ ಕಾಲುವೆ (ತೊಂಡಿಹಾಳ) ವತಿಯಿಂದ ಆಯೋಜಿಸಲಾಗಿರುವ ಗ್ರಾಮೀಣ ಮಟ್ಟದ ಸ್ಟಂಪರ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್-2022 ರಸಮಾರೋಪ ಸಮಾರಂಭ ನಡೆಯಿತು.
ಈ ವೇಳೆಯಲ್ಲಿ ಜಿ. ತಿಮ್ಮಾರಡ್ಡಿಗೌಡ ಗಿಲ್ಲೇಸೂಗೂರು, ಶಶಿಕಿರಣ, ಬಿ.ಮಂಜುನಾಥ ನಾಯಕ, ನಾಗರಾಜ, ಮಂಜುನಾಥ, ಬಸವರಾಜ ಸದಸ್ಯರು, ದೇವರಾಜ ಮೈಸೂರು, ಹನುಮಂತ ತಳವಾರ, ದುರುಗಪ್ಪ ಜಂಗ್ಲಿ, ದೇವರಾಜ, ಪರಶು, ದೇವ, ಅಮರೇಶಪ್ಪ, ರೇಣುಕಪ್ಪ, ವೀರೇಶ, ವೀರೇಶ ಚಿಗರಿ,ಹುಸೇನಸಾಬ್, ರಾಘವೇಂದ್ರ ಸದಸ್ಯರು, ರಾಮು ಹೀರೆಮನಿ, ಹಾಗೂ ತಂಡದ ಯುವಕರು ಸೇರಿದಂತೆ ಉಪಸ್ಥಿತರಿದ್ದರು. ಟೂರ್ನಾಮೆಂಟ್ ನ ವಿಜೇತರಾದ ನಾಗರಹಳ್ಳಿ ತಂಡಕ್ಕೆ ಮತ್ತು ರನ್ನರ್ ಅಪ್ ಆದ 28ನೇ ಕಾಲುವೆ (ತೊಂಡಿಹಾಳ) ತಂಡಕ್ಕೆ ಬಹುಮಾನ ವಿತರಿಸಿದರು.