ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡಲು ಒತ್ತಾಯ

ವಾಲ್ಮೀಕಿ ಸಮೂದಾಯದ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ರಾಜ್ಯ ವಾಲ್ಮೀಕಿ ಯುವ ವೇದಿಕೆ ತಾಲೂಕ

ಹುನಗುಂದ 24: ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶತಪ್ರಯತ್ನ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ನೀಡದಿರುವದು ವಾಲ್ಮೀಕಿ ಸಮೂದಾಯಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ರಾಜ್ಯ ವಾಲ್ಮೀಕಿ ಯುವ ವೇದಿಕೆ ತಾಲೂಕ ಅಧ್ಯಕ್ಷ ಸಿದ್ದಪ್ಪ ಜಾಲಿಗಿಡದ ಆರೋಪಿಸಿದರು.                                       

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವ ನಮ್ಮ ಸಮೂದಾಯದಿಂದ 10ಜನ ಶಾಸಕರು ಚುನಾಯಿತಗೊಂಡಿದ್ದಾರೆ. ಅದರಲ್ಲಿ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದು ಶೇಕಡಾವಾರಿನಲ್ಲಿ ನಮಗೆ ಅನ್ಯಾಯವಾಗಿದೆ. ವಾಲ್ಮೀಕಿ ಸಮೂದಾಯಕ್ಕೆ ಕನಿಷ್ಠ 3ಜನ ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಅದರಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನದ ಪ್ರಾತನಿಧ್ಯ ನೀಡಬೇಕೆಂದು ಜಾಲಿಗಿಡದ ಒತ್ತಾಯಿಸಿದರು. ಕಾರ್ಯದರ್ಶಿ ಮಂಜುನಾಥ ವಾಲಿಕಾರ ಮಾತನಾಡಿ ತಕ್ಷಣವೆ ಬಿಜೆಪಿ ಪಕ್ಷದ ಹೈಕಮಾಂಡ ಡಚ್ಚೆತ್ತುಕೊಂಡು ಜಾರಕಿಹೊಳಿ ಕುಟುಂಬದವರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಸಮೂದಾಯದ ಪ್ರಭಲ ವ್ಯಕ್ತಿ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸಸ್ಥಾನ ನೀಡಬೇಕೆಂದು ಅವರು ಗೋಷ್ಠಿಯಲ್ಲಿ ಒತ್ತಾಯಿಸಿದರು. ಸುರೇಶ ಗೌಡರ ಇದ್ದರು.