ಶ್ರೀಶೈಲಪ್ಪಾ ಮಗದುಮ್ಮ ನಿಧನ

ಉಳ್ಳಾಗಡ್ಡಿ-ಖಾನಾಪೂರ 26: ಸಮೀಪದ ಘೋಡಗೇರಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕರು, ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷರು ಗ್ರಾಮದ ಹಿರಿಯರಾದ ಶ್ರೀಶೈಲಪ್ಪಾ ಬಸವಣ್ಣೆಪ್ಪಾ ಮಗದುಮ್ಮ ್ಲ88್ವ ಶುಕ್ರವಾರ ದಿ. 26 ರಂದು ನಿಧನರಾದರು. 

 ಮೃತರು ಇಬ್ಬರು ಪುತ್ರಿಯರು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ. ಮೃತರು ವಿವಿಧ ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದರು. ಇವರ ಅಗಲಿಕೆಯಿಂದ ಹಿರಿಯ ಮಾರ್ಗದರ್ಶಕರನ್ನು ಗ್ರಾಮ ಕಳೆದುಕೊಂಡಂತಾಗಿದೆ. ಮೃತರ ಅಂತ್ಯಕ್ರೀಯೆ ದಿ. 27 ರಂದು ಮುಂಜಾನೆ 10 ಕ್ಕೆ ಸ್ವಗ್ರಾಮ ಘೋಡಗೇರಿಯಲ್ಲಿ ನೆರವೇರಲಿದೆ.