ಸುಕ್ಷೇತ್ರ ಹಂಪೀಹೊಳಿಯಲ್ಲಿ ಭವಾನಿ ಇನಾಮದಾರರಿಂದ ದಾಸವಾಣಿ

ರಾಮದುರ್ಗ 13: ಕುಮಶಿನಾರಸಿಂಹ ಯತಿಗಳ ಆರಾಧನಾ ಪ್ರಯುಕ್ತ ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಹಂಪೀಹೊಳಿಯಲ್ಲಿ ದತ್ತಾತ್ರೇಯ ಭಜನೆ ಸಪ್ತಾಹ ಮಹೋತ್ಸವದಲ್ಲಿ ಹುಬ್ಬಳ್ಳಿಯ ಕೇಶ್ವಾಪೂರದ ಉದಯೋನ್ಮುಖ ಕಲಾವಿದೆ ಭವಾನಿ ಇನಾಮದಾರ ಅವರಿಂದ ಏ.16ರಂದು ರವಿವಾರ ಸಂಜೆ 7 ಕ್ಕೆ ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದು ಇವರೊಂದಿಗೆ ಖ್ಯಾತ ತಬಲಾ ವಾದಕರಾದ ಬೆಂಗಳೂರಿನ ಪಂಡಿತ ಅನಂತ ಹಂಪೀಹೊಳಿಯವರು ತಬಲಾ ಸಾಥ ನೀಡಲಿದ್ದಾರೆ ಎಂದು ಅಧ್ಯಕ್ಷರು, ಶ್ರೀದತ್ತಾತ್ರೇಯ ದೇವಸ್ಥಾನ ಸಮಿತಿ,ಸುಕ್ಷೇತ್ರ ಹಂಪೀಹೊಳಿ,(ರಾಮದುರ್ಗ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ