ರಾಜಕೀಯ ಜನಜಾಗೃತಿಗಾಗಿ ದಲಿತ ಸಂಘರ್ಷ ಸಮಿತಿ ಆಂದೋಲನ

ಗದಗ 27:  ಚುನಾವಣೆ ಸಂವಿಧಾನದ ಸೌಂದರ್ಯ, ಸಂವಿಧಾನ ಒಪ್ಪದ ಮನುವಾದಿಗಳ ಕೈಯಲ್ಲಿ ನಾವು ಅಧಿಕಾರ ಒಪ್ಪಿಸಿದ್ದೇವೆ. ಸಂವಿಧಾನವಮ್ನ ಯಾರು ಗೌರವಿಸುತ್ತಾರೋ ಅಂತವರನ್ನ ನಾವು ಆಯ್ಕೆ ಮಾಡಬೇಕಾಗಿದೆ ಎಂದು ದಲಿತ ಮುಖಂಡ ವೆಂಕಟೇಶ ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 

ದಲಿತ ಸಂಘರ್ಷ ಸಮಿತಿ ಮುಖಂಡ ಗಣೇಶ ಬಾಳಮ್ಮನವರ ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗುತ್ತಿದೆ ಅಂತಾ ಎಲ್ಲರಿಗೂ ಗೊತ್ತಾಗುತ್ತಿದ್ದು, ಕಾಂಗ್ರೆಸ್ ಉತ್ತಮ ಅಂತಾ ಅರಿತು ನಾವು ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಜನಜಾಗೃತಿ ಸಭೆ ಮಾಡುತ್ತಿರುವುದಾಗಿ ಹೇಳಿದರು.

ಪತ್ರಿಕಾ ಗೋಷ್ಠಿ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ  ಗದಗ ಜಿಲ್ಲಾ ಸಂಚಾಲಕ ಬಾಲರಾಜ ಅರಬರ, ಜಿಲ್ಲಾ ಡಿ.ಎಸ್‌.ಎಸ್‌.ಸಹ ಸಂಚಾಲಕ ನಾಗರಾಜ ಗೋಕಾವಿ,ಮಹೇಶ ಛಲವಾದಿ, ವಾಸುದೇವ, ಮಾರುತಿ ಅಂಗಡಿ, ಮುತ್ತಪ್ಪ ಭಜಂತ್ರಿ ಸೇರಿದಂತೆ ಇತರರಿದ್ದರು.