ಬೀದಿ ನಾಯಿಗಳ ಅಟ್ಟಹಾಸ ಆಕಳು ಕರು ಸಾವು
Cow and calf die due to attack by stray dogs
ಲಕ್ಷ್ಮೇಶ್ವರ " 25 : ತಾಲ್ಲೂಕಿನ ಗೊಜನೂರ ಗ್ರಾಮದ ರೈತ ಮುಖಂಡರು ಹಾಗೂ ಕೃಷಿಕ ಸಮಾಜ ನವದೆಹಲಿ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷರು ಆದ ಚನ್ನಪ್ಪ ಷಣ್ಮುಖಿ ಎಂಬುವ ರೈತರು ತಮ್ಮ ಮನೆಯಲ್ಲಿ ಜೋಪಾನ ಮಾಡಿದ ಆಕಳು ಕರುವಿನ ಮೇಲೆ ಬುಧುವಾರ ಬೀದಿ ನಾಯಿಗಳು ಅಟ್ಟಹಾಸ ಮೆರೆದಿವೆ ಕರುವಿಗೆ ಎಲ್ಲೆಂದರಲ್ಲಿ ಕಚ್ಚಿ ಮಾಸ ತಿಂದು ಗಾಯ ಗೊಳಿಸಿ ಕೊನೆಗೂ ಜೀವ ತೆಗೆದ ಘಟನೆ ನಡೆದಿದ್ದು ಆಕಳು ಜೋಪಾನ ಮಾಡಿದ್ದ ರೈತ ಕುಟುಂಬದ ಮನೆಯವರು ಕಣ್ಣೀರು ಸುರಿಸುವಂತೆ ಆಗಿದೆ ಇದಕ್ಕೆಲ್ಲ ಕಾರಣ ಗ್ರಾಮದ ಹತ್ತಿರ ಇರುವ ಚಿಕನ್ ಸೆಂಟರ್ , ಆ ಚಿಕನ್ ಸೆಂಟರ್ ಇರುವುದರಿಂದ ಗ್ರಾಮದಲ್ಲಿ ಬೀದಿ ನಾಯಿಗಳು ಹಾವಳಿ ಹೆಚ್ಚಾಗಿದ್ದು ಕಳೆದ ಕೆಲವು ದಿನಗಳ ಹಿಂದೆ ಬೀದಿ ನಾಯಿಗಳ ಹಾವಳಿಗೆ ಕೆಲವು ದನಕರುಗಳು ಗಾಯಗೊಂಡು ಘಟನೆಗಳು ನಡೆದಿದ್ದವು ಈಗ ಆಕಳ ಕರು ಸಾವು ಕಂಡಿದ್ದು ಇದೇ ರೀತಿ ಮುಂದೆ ಯಾವ ಪ್ರಾಣಿ ಪಕ್ಷಿಗಳಿಗೆ ದನ ಕರುಗಳಿಗೆ ಮಕ್ಕಳಿಗೆಮನುಷ್ಯ ಆಗಬಾರದು ಎಂಬ ಉದ್ದೇಶದಿಂದ ಪಂಚಾಯತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಚಿಕ್ಕನ್ ಅಂಗಡಿಯನ್ನು ತೆರೆವು ಗೂಳಿಸಬೇಕು ಎಂದು ಆಕಳುಕರು ಕಳೆದುಕೊಂಡ ರೈತ ಕುಟುಂಬದವರು ಪಂಚಾಯಿತಿಗೆ ಮತ್ತು ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸಿದ್ದು ಅಧಿಕಾರಿಗಳು ಚಿಕನ್ ಅಂಗಡಿಯನ್ನು ತೆರುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುವುದು ಗ್ರಾಮಸ್ಥರ ಹಾಗೂ ಸಮಗ್ರ ರೈತ ಹೋರಾಟಗಾರರು ಸಹ ಆಗ್ರಹಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 