ಕಾಂಗ್ರೆಸ್‌ನವರು ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ರಕ್ಷಿಸುತ್ತಿದೆ: ಜೋಶಿ

ಶಿಗ್ಗಾವಿ 27: ಕೇಂದ್ರ ಸರಕಾರದ ಸಂಜೀವಿನಿ ಯೋಜನೆಯಲ್ಲಿ ಸ್ವಸಹಾಯ ಒಕ್ಕೂಟಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಸಬ್ಸಿಡಿ ಸಹಿತವಾಗಿ ವ್ಯಾಪಾರ ವಹಿವಾಟು ಮಾಡಿ 3 ಕೋಟಿ ಮಹಿಳೆಯರನ್ನ ಲಕ್ಷಾಧಿಪತಿಗಳನ್ನಾಗಿ ಮಾಡುವ ಯೋಜನೆಯನ್ನ ಈಗಾಗಲೇ ಮಾಡಲಾಗಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್   ಜೋಶಿ ಹೇಳಿದರು.ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಕಬನೂರ, ಹುಲಗೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಎಲ್ಲ ಹಳ್ಳಿಗಳಿಗೆ ಡ್ರೋನ್ ಕೊಟ್ಟು ಆ ಡ್ರೋನ್ ನಡೆಸಲು ಮಹಿಳೆಯರಿಗೆ ತರಬೇತಿ ಕೊಡಲಾಗುತ್ತಿದೆ, ಕೃಷಿ ಸಮ್ಮಾನ್ ನಿಧಿ ಯೋಜನೆ, ಆಯುಷ್ಮಾನ್ ಯೋಜನೆ ಮಾಡಲಾಗಿದೆ, ಜನತೆಗೆ ಹೊರೆಯಾಗದ ರೀತಿಯ ಯೋಜನೆಗಳನ್ನ ಕೇಂದ್ರ ಮೋದಿ ಸರಕಾರ ಮಾಡುತ್ತಿದೆ,410 ಕೋಟಿ ರೂಗಳಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಗಳ ಮನೆಮನೆಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಕೈಗೊಳ್ಳಲಾಗಿದೆ, ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲ ದರಗಳನ್ನ ಏರಿಸಿ ಜನತೆಗೆ ಗ್ಯಾರಂಟಿಗಳ ನೆಪ ಹೇಳಿ ಒಬ್ಬರಿಂದ ಕಸಿದು ಒಬ್ಬರಿಗೆ ಕೊಡುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೇಸ್  ವಿರುದ್ಧ ಹರಿಹಾಯ್ದ ಜೋಶಿ ಅವರು, ಈಗಾಗಲೇ ಪಹಣಿ ಪತ್ರಿಕೆ, ಸ್ಟ್ಯಾಂಪ್ ದರ, ಬಾಂಡ್ ದರಗಳನ್ನ ಹೆಚ್ಚಿಸಿ ಜನತೆಗೆ ಕಷ್ಟ ತಂದೊಡ್ಡಿದ್ದಾರೆ, ಮೋದಿಯವರು ದೇಶ ಸೇರದಂತೆ ಜೀವನದ ಭದ್ರತೆಯ ಗ್ಯಾರಂಟಿಯನ್ನು ಈಗಾಗಲೇ ಘೋಷಿಸಿದ್ದಾರೆ ಕಾಂಗ್ರೇಸ್ ನವರು ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ, ಟೆರರಿಸ್ಟ್‌ ಗಳು ಹೋಟಲ್ ಗಳಲ್ಲಿ ಬಾಂಬ್ ಹಾಕಿದರೂ ರಾಜ್ಯ ಸರ್ಕಾರ ಅದು ಸಿಲಿಂಡರ್ ಸ್ಫೋಟ ಎಂದು ಹೇಳಿಕೆ ನೀಡುತ್ತಿದ್ದಾರೆ, ಮೋದಿಯವರು ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಕಾಳಜಿ ವಹಿಸಿ ಆ ಟೆರರಿಷ್ಟಗಳನ್ನ ಹಿಡಿಯುವಂತೆ ಮಾಡಿದ್ದಾರೆ.  

ಕಾಂಗ್ರೆಸ್ ಸರಕಾರ ಮುಸ್ಲಿಂರನ್ನ ಓಲೈಸುವ ಕಾರ್ಯ ಮಾಡಿ ಈ ರೀತಿಯ ಆಡಳಿತವನ್ನು ನಡೆಸಿದ್ದರಿಂದ ಹುಬ್ಬಳ್ಳಿಯ ನೇಹಾ ಹಿರೇಮಠ ಹೆಣ್ಣು ಮಗಳನ್ನ ಭರ್ಬರ ಹತ್ಯೆ ಮಾಡುವಷ್ಟು ಧೈರ್ಯ ಅವರಿಗೆ ಬರುವಂತೆ ಮಾಡಿದ್ದಾರೆ, ಹೀಗಾಗಿ ಜನತೆ ಕಾಂಗ್ರೆಸ್ಸನ್ನ ತಿರಸ್ಕರಿಸುತ್ತಿದ್ದಾರೆ, ಆದ್ದರಿಂದ ಜೀವನದ ಭದ್ರತೆಯನ್ನು ಕೊಡುವುದು ಏಕ ಮಾತ್ರ ದೇಶದ ನಾಯಕ ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ, ನಾವು ನಿಮ್ಮ ಜೊತೆ ಸದಾ ಇರುತ್ತೇವೆ  ಕ್ಷೇತ್ರಕ್ಕೆ ನಾನು ಬರುವುದು ಕಡಿಮೆಯಾಗಿದ್ದರೂ ಸಹಿತ ಜನತೆ ನನಗೆ ಬಹಳಷ್ಟು ಸಹಕಾರವನ್ನು ನೀಡಿದ್ದಾರೆ ಮುಂದೆಯೂ ಸಹಿತ ಸಂಪೂರ್ಣ ಸಹಕಾರ ನೀಡಿ, ಬೊಮ್ಮಾಯಿಯವರು ಈ ಕ್ಷೇತ್ರದ ಶಾಸಕರಿದ್ದರು, ಅವರು ಸಹಿತ ಈಗ ಹಾವೇರಿ- ಗದಗ ಲೋಕಸಭಾ ಅಭ್ಯರ್ಥಿಗಳಾಗಿರುವುದರಿಂದ ಇನ್ನು ಮುಂದೆ ಇಲ್ಲಿಯ ಕೆಲಸ ಕಾರ್ಯಗಳಿಗೆ ನೇರವಾದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು. ಇದಕ್ಕೂ ಪೂರ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜೋಷಿಯವರನ್ನ ಸನ್ಮಾನಿಸಿ ನೆಚ್ಚಿನ ನಾಯಕನಿಗೆ ಭವ್ಯ ಸ್ವಾಗತ ಕೋರಿದರು.

ಬಿಜೆಪಿ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಗಂಗಣ್ಣ ಸಾತಣ್ಣನವರ, ಶಿವಪ್ರಸಾದ ಸುರಗೀಮಠ, ತಿಪ್ಪಣ್ಣ ಸಾತಣ್ಣನವರ, ನರಹರಿ ಕಟ್ಟಿ, ನಿವೃತ್ತ ಮಾಜಿ ಸೈನಿಕ ಪರಶುರಾಮ ದಿವಾನರ, ಡಾ. ಮಲ್ಲೇಶಪ್ಪ ಹರಿಜನ, ಕರೆಪ್ಪ ಕಟ್ಟಿಮನಿ, ರಮೇಶ ಸಾತಣ್ಣವರ, ವಿರುಪಾಕ್ಷಪ್ಪ ಪಠ್ಯೇದ, ಆನಂದ ಸುಬೇದಾರ, ರೇವಣಸಿದ್ದಪ್ಪ ಸೊರಟೂರ, ಹನುಮಂತಪ್ಪ ವಾಲ್ಮೀಕಿ, ಶಿವರಾಜ ಹುಲಸೋಗಿ, ಬಸವರಾಜ ಸೊರಟೂರ, ಮಲ್ಲೇಶಪ್ಪ ಹಡಪದ ಸೇರಿದಂತೆ ವಿವಿಧ ಗ್ರಾಮಗಳ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.