ಜನರ ರಕ್ಷಣೆಯಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರ: ಮ್ಯಾಗೇರಿ

ಶಿಗ್ಗಾವಿ 20: ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಕಾನೂನಿನ ಭಯ ಇಲ್ಲ ಅಭಿವೃದ್ಧಿ ಕಡೆ ಚಿಂತನೆ ಇಲ್ಲದ ಕಾಂಗ್ರೆಸ್ ಸರಕಾರದ ಆಡಳಿತ ನಮಗೆ ಬೇಕಾಗಿಲ್ಲ ಎಂದು  ರಾಜ್ಯಾದ್ಯಂತ ಜನಕ್ರೋಶಗೊಂಡಿದೆ ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಮಾಜಿ ನಿಗಮ ಮಂಡಳಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಡೆ ಹಗಲೇ ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್ ನಲ್ಲಿ ಕಾರ​‍್ೊರೇಟರ್ ಮಗಳು ನೇಹ ಹಿರೇಮಠ್ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಡೀ ದೇಶದ ಜನರನ್ನು ತಲ್ಲಣ ಗೊಳಿಸಿದೆ ಭಯಗೊಳಿಸಿದೆ ಹೆಣ್ಣು ಮಕ್ಕಳಿಗೆ ರಕ್ಷಣೆ ನ್ಯಾಯ ಸಿಗುವ ಭರವಸೆಯನ್ನು ಜನತೆ ಈ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದುಕೊಂಡಿದೆ ರಾಜ್ಯದ ಜನರು ತಮ್ಮ ಮಕ್ಕಳನ್ನು ಮನೆಯಿಂದ ಶಾಲೆ ಕಾಲೇಜುಗಳಿಗೆ ಕಳಿಸಲು ಭಯ ಬೀತರಾಗಿದ್ದಾರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಕೇವಲ ತಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಹಗಲಿರುಳು ಆಡಳಿತ ನಡೆಸಿದ್ದಾರೆ ರಾಜ್ಯಾದ್ಯಂತ ಅಭಿವೃದ್ಧಿ ರಾಜ್ಯದ ಜನರ ನೆಮ್ಮದಿಯ ಬದುಕು ಇವರಿಗೆ ಬೇಕಾಗಿಲ್ಲ ವಿದ್ಯಾರ್ಥಿನಿ ನೇಹಾ ಹಿರೇಮಠದ ಕೊಲೆ ಪ್ರಕರಣ ಲಘುವಾಗಿ ತೆಗೆದುಕೊಂಡ ಗೃಹ ಸಚಿವರು ಇದೊಂದು ಪ್ರೇಮ ಪ್ರಕರಣ ಎಂದು ಹೇಳಿಕೆ ನೀಡಿರುವುದು ಇದು ಯಾವ ನ್ಯಾಯ ಇಂತಹ ಕೃತ್ಯಗಳಿಗೆ ಪುಷ್ಟಿ ನೀಡಿದಂತಾಗುತ್ತದೆ. ಕೂಡಲೇ ಎಚ್ಚೆತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಕೊಲೆಗೈದ ಪಾಪಿಗೆ ಕೂಡಲೇ ಗಲ್ಲು ಶಿಕ್ಷೆಗೆ ಆದೇಶ ಮಾಡಬೇಕು ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕು ಎಂದರು.