ಅಥಣಿ ರಾಯರ ಮಠದ ಅಭಿವೃದ್ಧಿಗೆ ಬದ್ಧ: ಶಾಸಕ ಲಕ್ಷ್ಮಣ ಸವದಿ
Committed to the development of Athani Raya Mutt: MLA Lakshman Savadi
ಅಥಣಿ ರಾಯರ ಮಠದ ಅಭಿವೃದ್ಧಿಗೆ ಬದ್ಧ: ಶಾಸಕ ಲಕ್ಷ್ಮಣ ಸವದಿ
ಅಥಣಿ 10: ಗುರು ರಾಘವೇಂದ್ರ ಸ್ವಾಮೀಜಿ ಕಲಿಯುಗದ ಕಲ್ಪವೃಕ್ಷರಾಗಿ ತಮ್ಮ ಭಕ್ತರನ್ನು ಉದ್ಧರಿಸುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಭಿನವ ಮಂತ್ರಾಲಯ ಎಂದೇ ಪ್ರಖ್ಯಾತಿ ಪಡೆದ ಅಥಣಿ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡುತ್ತಿದ್ದರು.
ರಾಜಕೀಯ ಜೀವನ ಪ್ರವೇಶಿಸುವ ಮೊದಲಿನಿಂದಲೂ ನಾನು ರಾಘವೇಂದ್ರ ಸ್ವಾಮಿಗಳ ಭಕ್ತನಾದ ನಾನು ವರ್ಷಕ್ಕೆ ಎರಡು ಬಾರಿಯಾದರೂ ಮಂತ್ರಾಲಯಕ್ಕೆ ಹೋಗಿ ರಾಯರ ವೃಂದಾವನದ ದರ್ಶನ ಪಡೆಯುತ್ತೇನೆ ಮತ್ತು ನನ್ನ ರಾಜಕೀಯ ಜೀವನ ಯಶಸ್ವಿಯಾಗುವಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗೃಹ ಕೂಡ ಇದೆ ಎಂದ ಅವರು ಅಥಣಿ ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿಗಾಗಿ ನಾನು ಸದಾ ಬದ್ಧನಾಗಿರುವೆ ಎಂದರು.
ರಾಘವೇಂದ್ರ ಸ್ವಾಮಿ ಮಠದ ವಿಶ್ವಸ್ಥ ಮಂಡಳಿಯ ಅನೀಲರಾವ ದೇಶಪಾಂಡೆ (ಸರಾಫ), ಅನೀಲ ದೇಶಪಾಂಡೆ ( ಹಿಡಕಲ್), ಎಲ್.ವ್ಹಿ.ಕುಲಕರ್ಣಿ, ರಾಜು ಪಾಟೀಲ, ಶ್ರೀನಿವಾಸಾಚಾರ್ಯ ಜೋಶಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಗೌರವಿಸಿದರು. ಧುರೀಣರಾದ ಶ್ರೀರಾಮ ಕಟ್ಟಿ, ಅಜಿತ ಇನಾಮದಾರ, ಸುಧೀಂದ್ರ ಬಾದರಾಯಣಿ, ವಾಸುದೇವ ಕುಲಕರ್ಣಿ, ಸೌರಭ ಮಾಶ್ಯಾಳ, ವೆಂಕಟೇಶ ದೇಶಪಾಂಡೆ, ಅನೀಲ ಕುಲಕರ್ಣಿ, ದೀಪಕ್ ಟಿಕಾರೆ, ವೆಂಕಟೇಶ ಕುಲಕರ್ಣಿ, ಅಥರ್ವ ದೇಶಪಾಂಡೆ, ಶ್ರೀಹರಿ ಕುಲಕರ್ಣಿ, ಅಜಯ ದೇಶಪಾಂಡೆ, ಭಾರ್ಗವ ಕೊಕಟನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ನಿಮಿತ್ಯ ಸಾವಿರಾರು ಭಕ್ತರು ಅನ್ನ, ಪ್ರಸಾದ ಸ್ವೀಕರಿಸಿದರು. ಸಂಜೆ ಬೆಂಗಳೂರಿನ ಅನುರಾಧಾ .ಎ. ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 